alex Certify BIG NEWS: ಭೀಕರ ಸುಂಟರ ಗಾಳಿಗೆ ಕಂಗಾಲಾದ ಕರಾವಳಿ ಜನರು; ಧರೆಗುರುಳಿದ ಮರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭೀಕರ ಸುಂಟರ ಗಾಳಿಗೆ ಕಂಗಾಲಾದ ಕರಾವಳಿ ಜನರು; ಧರೆಗುರುಳಿದ ಮರಗಳು

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟದ ನಡುವೆ ಬಿರುಗಾಳಿ ಬೀಸುತ್ತಿದ್ದು, ಜನಜೀವನ ಅಯೋಮಯವಾಗಿದೆ. ಉಡುಪಿ ಜಿಲ್ಲೆಯ ಅಮವಾಸ್ಯೆಬೈಲಿನಲ್ಲಿ ಭೀಕರ ಸುಂಟರಗಾಳಿ ಬೀಸುತ್ತಿದ್ದು, ಜನರು ಕಂಗಾಲಾಗಿದ್ದಾರೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ನಡುವೆ ಬಿರುಗಾಳಿ ಅಬ್ಬರ ಜೋರಾಗಿದೆ. ಅದರಲ್ಲಿಯೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮವಾಸ್ಯೆಬೈಲಿನಲ್ಲಿ ಭಾರಿ ಸುಂಟರಗಾಳಿ ಬೀಸುತ್ತಿದ್ದು, ಗ್ರಾಮದ ಜನತೆ ತತ್ತರಿಸಿಹೋಗಿದ್ದಾರೆ.

ಸುಂತರಗಾಳಿಗೆ ಬೃಹತ್ ಮರಗಳು ಧರಾಶಾಹಿಯಾಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವು ಮನೆಗಳಿಗೂ ಹಾನಿಯುಂತಾಗಿದೆ. ಸುಂತರಗಾಳಿ ಹೊಡೆಅಕ್ಕೆ ಜನಜೀವನ ಅಸ್ತವ್ಯಸ್ಥವಾಗಿದ್ದು ಜನರು ಜೀವಭಯದಲ್ಲಿ ಕಾಲಕಳೆಯುಂತಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...