alex Certify ಉಮಾಪತಿಗೆ ಟಕ್ಕರ್ ನೀಡಲು ಮುಂದಾದ ನಟ ದರ್ಶನ್ ಫ್ಯಾನ್ಸ್ ; ಇಂದು ‘ಡಿ ಬಾಸ್ ಜಿಂದಾಬಾದ್’ ಬೈಕ್ ರ್ಯಾಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಮಾಪತಿಗೆ ಟಕ್ಕರ್ ನೀಡಲು ಮುಂದಾದ ನಟ ದರ್ಶನ್ ಫ್ಯಾನ್ಸ್ ; ಇಂದು ‘ಡಿ ಬಾಸ್ ಜಿಂದಾಬಾದ್’ ಬೈಕ್ ರ್ಯಾಲಿ

ಬೆಂಗಳೂರು : ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ನಡುವಿನ ವಾಕ್ಸಮರ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಟಕ್ಕರ್ ನೀಡಲು ದರ್ಶನ್ ಅಭಿಮಾನಿಗಳು ‘ಡಿ ಬಾಸ್ ಜಿಂದಾಬಾದ್’ ರ್ಯಾಲಿ ನಡೆಸಲಿದ್ದಾರೆ.

ಬೊಮ್ಮನಹಳ್ಳಿಯಲ್ಲಿ (ಫೆ.26 ) ಇಂದು ದರ್ಶನ್ ಅಭಿಮಾನಿಗಳು ಬೃಹತ್ ರ್ಯಾಲಿ ನಡೆಸಲಿದ್ದು, ಮಹಾ ಗಣಪತಿ ದೇವಸ್ಥಾನದಿಂದ ಹೆಚ್ ಎಸ್ ಆರ್ ಲೇಔಟ್ ಬಿಡಿಎಂ ಕಾಂಪ್ಲೆಕ್ಸ್ ವರೆಗೆ ಬೈಕ್ ರ್ಯಾಲಿ ನಡೆಯಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಮಾಪತಿ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಮುಂದಿನ ಬಾರಿ ಕೂಡ ಮತ್ತೆ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಲು ತಯಾರಿ ನಡೆಸಿದ್ದಾರೆ. . ಬೈಕ್ ರ್ಯಾಲಿ ವೇಳೆ ಉಮಾಪತಿ ಬೆಂಬಲಿಗರು ಹಾಗೂ ದರ್ಶನ್ ಬೆಂಬಲಿಗರ ನಡುವೆ ವಾಗ್ವಾದ ನಡೆಯುವ ಸಂಭವವಿದ್ದು, ಪೊಲೀಸರು ಎಚ್ಚರ ವಹಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...