alex Certify ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದ ‘ಪಬ್’ ಬೌನ್ಸರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದ ‘ಪಬ್’ ಬೌನ್ಸರ್ಸ್

ಬೆಂಗಳೂರಿನ ಪಬ್ ಒಂದರ ಮೂವರು ಬೌನ್ಸರ್ಗಳು ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋರಮಂಗಲದ ಐದನೇ ಬ್ಲಾಕ್ ನಲ್ಲಿರುವ ಅಪ್ ಸ್ಕೇಲ್ ಪಬ್ ಬೌನ್ಸರ್ ಗಳ ವಿರುದ್ಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆನ್ನೈ ಮೂಲದ ಶ್ರೀರಾಮ್ ಎಂಬುವರು ದೊಮ್ಮಲೂರು ಬಳಿಯ ಪಟೇಲ್ ರಾಮರೆಡ್ಡಿ ರಸ್ತೆಯಲ್ಲಿ ವಾಸವಾಗಿದ್ದು, ಹುಟ್ಟುಹಬ್ಬ ಆಚರಣೆ ನಿಮ್ಮಿತ್ತ ತಮ್ಮ 10 ಮಂದಿ ಸ್ನೇಹಿತರೊಂದಿಗೆ ಪಬ್ ಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಮೊಬೈಲ್ ಕರೆ ಬಂದಿದ್ದು ಪಬ್ ಒಳಗಡೆ ಜೋರಾದ ಶಬ್ದವಿದ್ದ ಕಾರಣ ಮಾತನಾಡಲು ಹೊರಬಂದಿದ್ದಾರೆ. ಮಾತುಕತೆ ಮುಗಿದ ಬಳಿಕ ಮತ್ತೆ ಒಳ ಹೋಗಲು ಯತ್ನಿಸಿದಾಗ ಬೌನ್ಸರ್ಗಳು ಅವರನ್ನು ತಡೆದಿದ್ದಾರೆ.

ತಾವು ಈ ಮೊದಲೇ ಒಳಗಿದ್ದು ಫೋನ್ ಕರೆ ಬಂದಾಗ ಹೊರ ಬಂದಿದ್ದೇನೆ ಎಂದು ಹೇಳಿದರೂ ಅವರು ಬಿಡದಿದ್ದಾಗ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಮೂವರು ಬೌನ್ಸರ್ಗಳು ಟೆರೇಸ್ ಮೇಲೆ ಕರೆದುಕೊಂಡು ಹೋಗಿ ದವಡೆ ಮುರಿಯುವಂತೆ ಥಳಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...