alex Certify ಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ

ಮಟನ್ ನಲ್ಲಿ ಮೂಳೆ ಹಾಕಬೇಡ ಎಂದಿದ್ದಕ್ಕೆ ಗ್ರಾಹಕನ ಮೇಲೆ ಅಪ್ರಾಪ್ತ ಯುವಕನಿಂದ ಮಾರಣಾಂತಿಕ ಹಲ್ಲೆ | Crime News

ಶಿವಮೊಗ್ಗ: ಮಾಂಸದ ಅಂಗಡಿಯಲ್ಲಿ ಮೂಳೆಗಳನ್ನು ಹೆಚ್ಚಾಗಿ ಹಾಕಿದ್ದು, ಇದರ ಬದಲು ಮಟನ್ ಹೆಚ್ಚು ಹಾಕುವಂತೆ ಕೇಳಿದ್ದಕ್ಕೆ ಅನ್ಯ ಕೋಮಿನ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಶಿವಮೊಗ್ಗದ ಟಿಪ್ಪು ನಗರದ ಮಟನ್ ಅಂಗಡಿಯಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಗಾಡಿಕೊಪ್ಪ ನಿವಾಸಿ ಮಲ್ಲೇಶಪ್ಪ(40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪು ನಗರದ ಮಟನ್ ಅಂಗಡಿಯಲ್ಲಿ ಮಲ್ಲೇಶಪ್ಪ ಮಟನ್ ಖರೀದಿಸಿದ್ದು, ಮೂಳೆಗಳನ್ನು ಹೆಚ್ಚಾಗಿ ಹಾಕಲಾಗಿತ್ತು. ಹೀಗಾಗಿ ಅಪ್ರಾಪ್ತನ ತಂದೆಯನ್ನು ಕರೆದು ತಿಳಿಸಿದ್ದಾರೆ. ಆಗ ಆಕ್ರೊಶಗೊಂಡ ಅಪ್ರಾಪ್ತ ಹರಿತವಾದ ವಸ್ತುವಿನಿಂದ ಮಲ್ಲೇಶಪ್ಪ ಮೇಲೆ ಹಲ್ಲೆ ಮಾಡಿದ್ದಾನೆ. ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...