alex Certify ಲ್ಯಾಂಡ್‌ ಲೈನ್‌ ಫೋಟೋ ಹಂಚಿಕೊಂಡು ಆಕರ್ಷಕ ಅಡಿಬರಹ ನೀಡಿದ ಐಎಎಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಂಡ್‌ ಲೈನ್‌ ಫೋಟೋ ಹಂಚಿಕೊಂಡು ಆಕರ್ಷಕ ಅಡಿಬರಹ ನೀಡಿದ ಐಎಎಸ್‌ ಅಧಿಕಾರಿ

ಕೆಲವೇ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಲ್ಯಾಂಡ್​ಲೈನ್ ಫೋನ್​ನಿಂದ ಹಿಡಿದು ಸ್ಮಾರ್ಟ್​ಫೋನ್​ ಬಂದ ಬಗೆ ನೋಡಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. 2-3 ದಶಕಗಳಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಈಗ 2ಜಿ ಯಿಂದ 5ಜಿಯವರೆಗಿನ ತಂತ್ರಜ್ಞಾನ ಎಲ್ಲರನ್ನೂ ಮರುಳು ಮಾಡುವಂತಿದೆ.

ಪರಿಸ್ಥಿತಿ ಹೀಗಿರುವಾಗ ಎಷ್ಟೇ ಮುಂದುವರೆದರೂ ಹಿಂದಿನ ಕಾಲವೇ ಬೆಸ್ಟ್​ ಇತ್ತು ಎಂದುಕೊಳ್ಳುವವರು ಹಿರಿಯ ಜೀವಗಳು. ಸ್ಮಾರ್ಟ್​ಫೋನ್​ ಬಂದ ಮೇಲೆ ಎಲ್ಲರ ಜೀವನವೂ ಯಾಂತ್ರಿಕವಾಗಿದೆ. ಸಂಬಂಧಗಳಿಗೆ ಬೆಲೆ ಇಲ್ಲದಾಗಿದೆ ಎನ್ನುವುದು ತಿಳಿದದ್ದೇ.

ಇದೇ ವಿಷಯವನ್ನು ಸೂಚ್ಯವಾಗಿ ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್‌ನಲ್ಲಿ ಶೇರ್​ ಮಾಡಿದ್ದಾರೆ. ಫೋನ್‌ಗಳ ವಿಕಾಸದ ನಂತರ ಮಾನವರ ಬದಲಾವಣೆಯ ಬಗ್ಗೆ ಕಠಿಣವಾದ ಪೋಸ್ಟ್ ಒಂದನ್ನು ಅವರು ಹಂಚಿಕೊಂಡಿದ್ದಾರೆ.

ಅವನೀಶ್ ಶರಣ್ ಫೆಬ್ರವರಿ 17 ರಂದು ಮಾಡಿರುವ ಪೋಸ್ಟ್​ನಲ್ಲಿ ಟೇಬಲ್​ ಮೇಲಿರುವ ಲ್ಯಾಂಡ್​ಲೈನ್​ ದೂರವಾಣಿಯ ಚಿತ್ರವನ್ನು ನೋಡಬಹುದು. ಅದರ ಅಡಿ “ಫೋನ್ ಅನ್ನು ತಂತಿಯಿಂದ ಕಟ್ಟಿದಾಗ – ಮಾನವರು ಸ್ವತಂತ್ರರಾಗಿದ್ದರು” ಎಂದು ಬರೆದಿದ್ದಾರೆ. ಈ ಒಂದು ಲೈನಿನ ಒಳಾರ್ಥ ಬಹಳ ಗಮನಾರ್ಹವಾಗಿದೆ. ಆಗಲೇ ಜೀವನ ಚೆನ್ನಾಗಿತ್ತು. ಈಗ ಕೈಯಲ್ಲಿ ಮೊಬೈಲ್​ ಬಂದ ಮೇಲೆ ಸ್ಥಿತಿ ಹೇಗಾಗಿದೆ ಎನ್ನುವುದನ್ನು ತೋರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...