ಬೆಂಗಳೂರು : ನರೇಗಾ ಯೋಜನೆಯಲ್ಲಿ ಬೆವರು ಸುರಿಸಿದ ಕನ್ನಡಿಗರ ಕೂಲಿ ಕೊಡದೆ ಸತಾಯಿಸುತ್ತಿದೆ ಕೇಂದ್ರ ಸರ್ಕಾರ. ಇದು ರಾಜ್ಯದ ಬಿಜೆಪಿ ನಾಯಕರ ಗಮನಕ್ಕಿಲ್ಲವೇ? ಈ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವುದಿಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ನರೇಗಾ ಬಾಕಿ ಬಿಡುಗಡೆ ಮಾಡುವಂತೆ ಈಗಾಗಲೇ ಪತ್ರ ಬರೆದಿದ್ದೇವೆ, ಈಗಲೂ ಮತ್ತೊಮ್ಮೆ ಬರೆದಿದ್ದೇವೆ, ಹೀಗಿದ್ದೂ ಹಣ ಬಿಡುಗಡೆ ಮಾಡದಿರುವುದಕ್ಕೆ ಕಾರಣವೇನು? ಕೇಂದ್ರದ ಖಜಾನೆ ದಿವಾಳಿ ಆಗಿದೆಯೇ? ಅಥವಾ ಕನ್ನಡಿಗರ ಮೇಲಿನ ದ್ವೇಷಕ್ಕೆ ಅನುದಾನಗಳಲ್ಲಿ ‘ಹಲಾಲ್ ಕಟ್‘ ಮಾಡುತ್ತಿದೆಯೇ? ಬೆವರು ಸುರಿಸಿದ ಕನ್ನಡಿಗರು ಕೂಲಿ ಕೇಳುತ್ತಿದ್ದಾರೆ, ಕೇಂದ್ರ ಸರ್ಕಾರದ ಪರ ವಕಾಲತ್ತು ವಹಿಸುವ BJP Karnataka ನಾಯಕರು ನೀಡುವ ಉತ್ತರವೇನು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.