alex Certify ಶಾಲೆ ಶುರುವಾದ ಬೆನ್ನಲ್ಲೇ ಶಾಕಿಂಗ್ ನ್ಯೂಸ್: ಮತ್ತೆ 14 ಶಿಕ್ಷಕರಿಗೆ ಕೊರೋನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಶುರುವಾದ ಬೆನ್ನಲ್ಲೇ ಶಾಕಿಂಗ್ ನ್ಯೂಸ್: ಮತ್ತೆ 14 ಶಿಕ್ಷಕರಿಗೆ ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಶಾಲೆ ಶುರುವಾಗಿ ಎರಡು ದಿನದಲ್ಲಿ 16 ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿದೆ. ಶುಕ್ರವಾರದಿಂದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ಶಾಲೆಗಳಲ್ಲಿ ವಿದ್ಯಾಗಮ ಕಲಿಕೆ ಶುರುವಾಗಿದೆ.

ಮಕ್ಕಳು ಕೂಡ ಶಾಲೆಗೆ ಉತ್ಸಾಹದಿಂದ ಆಗಮಿಸತೊಡಗಿದ್ದಾರೆ. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ. ಆದರೆ, ರಾಜ್ಯದಲ್ಲಿ ಶನಿವಾರ 14 ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿರುವುದು ಆತಂಕ ಮೂಡಿಸಿದೆ.

ಮೊದಲ ದಿನ ಇಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಶಾಲೆಗೆ ಬರುವ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು ಪರೀಕ್ಷೆ ಮಾಡಿಸಿಕೊಂಡಿದ್ದ ಶಿಕ್ಷಕರಲ್ಲಿ ಉತ್ತರಕನ್ನಡಜಿಲ್ಲೆಯ ಇಬ್ಬರಿಗೆ, ಗದಗ ಜಿಲ್ಲೆಯ 10 ಜನರಿಗೆ ಹಾಗೂ ಹಾಸನದ ಮೂವರಿಗೆ ಮತ್ತು ಹಾವೇರಿ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
En gåde, der vil forvirre alle: Find det falske tal. Hvorfor ikke alle konservesglas skal vendes på hovedet: En Find pigen på billedet Hvorfor lugter vasketøj Hvor er de 3 forskelle mellem billederne: Hvordan optimere effekten af vaskemidler: Spar tid og