alex Certify ಸುಶಾಂತ್ ಸಿಂಗ್ ಗೆ ಗಾಯಗಳಾಗಿತ್ತು, ಮೂಳೆ ಮುರಿದಿತ್ತು; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ಗೆ ಗಾಯಗಳಾಗಿತ್ತು, ಮೂಳೆ ಮುರಿದಿತ್ತು; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪಗಳಿಗೆ ತಾಜಾ ಹೇಳಿಕೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ ಮತ್ತೊಂದು ತಿರುವು ಪಡೆಯುತ್ತಿದೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆಯೆಂದಿದ್ದ ಶಪಪರೀಕ್ಷೆ ನಡೆಸಿದ್ದ ಆರೋಗ್ಯ ಸಿಬ್ಬಂದಿ ಮತ್ತಷ್ಟು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ. ಶವಪರೀಕ್ಷೆಯ ಸಮಯದಲ್ಲಿ ಸುಶಾಂತ್‌ಗೆ ಗಾಯಗಳಾಗಿದ್ದವು ಅವರ ಮೂಳೆಗಳು ಮುರಿದಿದ್ದವು ಎಂದು ಮುಂಬೈನ ಕೂಪರ್ ಹಾಸ್ಪಿಟಲ್ ಸಿಬ್ಬಂದಿ ರೂಪ್ ಕುಮಾರ್ ಶಾ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ವೇಳೆ ಸುಶಾಂತ್ ಅವರ ಗಾಯಗಳನ್ನು ತಮ್ಮ ಹಿರಿಯ ವೈದ್ಯರಿಗೆ ತೋರಿಸಿದ್ದಾಗಿ ಹೇಳಿದ್ದಾರೆ. ಆದರೆ ಆ ವೇಳೆ ಹಿರಿಯ ವೈದ್ಯರು ಮೈಂಡ್ ಯುವರ್ ಬಿಸಿನೆಸ್ ( ನಿಮ್ಮ ವ್ಯವಹಾರವನ್ನು ನೋಡಿಕೊಳ್ಳಿ) ಎಂದು ಹೇಳಿದರು. ನಾನು ಶವಪರೀಕ್ಷೆ ತಂಡದ ಭಾಗವಾಗಿದ್ದೆ. ಶವಪರೀಕ್ಷೆ ತಂಡದ ಮುಖ್ಯಸ್ಥರಾಗಿದ್ದವರು ಯಾರೆಂದು ನನಗೆ ನೆನಪಿಲ್ಲ ಎಂದು ಸ್ಫೋಟಕ ಅಂಶ ಹೊರಹಾಕಿದ್ದಾರೆ.

ಸುಶಾಂತ್‌ನ ಕಣ್ಣುಗಳಿಗೆ ಗುದ್ದಲಾಗಿತ್ತು ಅವರ ಕುತ್ತಿಗೆಯ ಮೇಲೆ ಗುರುತುಗಳು ನೇಣು ಹಾಕಿಕೊಂಡಂತೆ ತೋರುತ್ತಿರಲಿಲ್ಲ. ಬದಲಾಗಿ ಅವರನ್ನ ಕತ್ತು ಹಿಸುಕಿದಂತೆ ತೋರುತ್ತಿತ್ತು ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಇತ್ತೀಚಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಹತ್ಯೆ ಆರೋಪದ ಬಗ್ಗೆ ಸಮಗ್ರವಾಗಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಅವರು ಸುದ್ದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು ಈ ಪುರಾವೆಯಲ್ಲಿ ಸ್ವಲ್ಪ ಸತ್ಯವಿದ್ದರೆ, ಅದನ್ನು ನಿಜವಾಗಿಯೂ ಶ್ರದ್ಧೆಯಿಂದ ಪರಿಶೀಲಿಸುವಂತೆ ನಾವು ಸಿಬಿಐಗೆ ಒತ್ತಾಯಿಸುತ್ತೇವೆ. ನೀವು ನ್ಯಾಯಯುತ ತನಿಖೆ ನಡೆಸಿ ಸತ್ಯವನ್ನು ನಮಗೆ ತಿಳಿಸುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...