
ಹಾಸನ: ಇನ್ನು 4-5 ತಿಂಗಳಲ್ಲಿ ಸರ್ಕಾರ ಬಿದ್ದು ಹೋಗಲಿದೆ. ಆಗ ಹೆಚ್ಡಿ.ರೇವಣ್ಣಗೆ ಜೈ ಜೈ ಅಂತಾರೆ ಎಂದು ಎಂಎಲ್ ಸಿ ಸೂರಜ್ ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಸೂರಜ್ ರೇವಣ್ಣ, ಅವರಿವರನ್ನು ಕೈಬಿಸಿ ಮಾಡಿಕೊಂಡು ಬರುತ್ತಾರೆ. ಆಗ ಆ ಕಡೆ ಹೋಗಿರುವವರ ಕಥೆ ಏನು? ಪ್ರಜ್ವಲ್ 1 ತಿಂಗಳಲ್ಲಿ ಜೈಲಿನಿಂದ ಹೊರಬರುತ್ತಾರೆ. ನಾವು ನೀವು ಸೇರಿ ಅವರಿಗೆ ಸ್ವಾಗತ ಮಾಡೋಣ ಎಂದರು.
ಮುಂದೆಯೂ ಪ್ರಜ್ವಲ್ ಗೆ ರಾಜಕೀಯ ಮಾಡುವುದು ಪ್ರಕ್ವಲ್ ಗೆ ಗೊತ್ತು. ಪ್ರಪಂಚ ಇವತ್ತಿಗೆ ಮುಗಿದು ಹೋಗಿಲ್ಲ. ನಾವೇನೂ ಇಲ್ಲಿಂದ ಒಡಿಹೋಗುವುದಿಲ್ಲ ಎಂದು ಹೇಳಿದ್ದಾರೆ.