ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗ್ರಾಮೀಣ ಮಕ್ಕಳಿಗಾಗಿ ಅರಿವು ಕೇಂದ್ರ ಭರ್ಜರಿ ಯಶಸ್ವಿಯಾಗಿದ್ದು, ಈವರೆಗೆ 47.83 ಲಕ್ಷ ಮಕ್ಕಳು ನೋಂದಣಿ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳುವ ಮತ್ತು ಓದುವ ಹವ್ಯಾಸ ಪ್ರೋತ್ಸಾಹಿಸಿದ ಪರಿಣಾಮ ‘ಅರಿವು ಕೇಂದ್ರʼಗಳಲ್ಲಿ ಒಟ್ಟು 47.83 ಲಕ್ಷ ಮಕ್ಕಳು ನೋಂದಣಿ ಆಗಿದ್ದಾರೆ ಎಂದು ಹೇಳಿದ್ದಾರೆ.