alex Certify ತಡವಾಗಿ ಬರುತ್ತಿದ್ದ ನೌಕರರಿಗೆ ಕಸಗುಡಿಸುವ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡವಾಗಿ ಬರುತ್ತಿದ್ದ ನೌಕರರಿಗೆ ಕಸಗುಡಿಸುವ ಶಿಕ್ಷೆ

ವಿಜಯಪುರ: ಕಚೇರಿಗೆ ತಡವಾಗಿ ಬರುತ್ತಿದ್ದ ಸಿಬ್ಬಂದಿಗೆ ಕಚೇರಿ ಆವರಣದ ಕಸಗುಡಿಸುವ ಶಿಕ್ಷೆ ನೀಡಲಾಗಿದೆ. ಬಸವನಬಾಗೇವಾಡಿಯ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ತಡವಾಗಿ ಕಚೇರಿಗೆ ಬರುತ್ತಿದ್ದರು. ಪದೇಪದೇ ಸೂಚನೆ ನೀಡಿದರೂ ತಡವಾಗಿ ಬಂದ ಹಿನ್ನಲೆಯಲ್ಲಿ ಈ ರೀತಿ ಶಿಕ್ಷೆ ನೀಡಲಾಗಿದೆ.

ಕಚೇರಿಗೆ ಬೇಗ ಬರುವಂತೆ ಐದಾರು ತಿಂಗಳಿನಿಂದ ಹೇಳಿದರೂ ನಾಲ್ಕೈದು ಜನ ನಿರ್ಲಕ್ಷ ತೋರಿ ತಡವಾಗಿ ಕಚೇರಿಗೆ ಬರುತ್ತಿದ್ದರು. ಸೋಮವಾರವೂ ತಡವಾಗಿ ಬಂದ ಸಿಬ್ಬಂದಿಗೆ ಕಚೇರಿ ಆಭರಣ ಸ್ವಚ್ಛಗೊಳಿಸುವಂತೆ ತಹಶೀಲ್ದಾರ್ ದುಂಡಪ್ಪ ಕೋಮಾರ ಸೂಚನೆ ನೀಡಿದ್ದಾರೆ.

ಕೆಲವು ಸಿಬ್ಬಂದಿ ಕಚೇರಿಗೆ ತಡವಾಗಿ ಬರುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಕಚೇರಿ ಹೊರ ಆವರಣ ಸ್ವಚ್ಛ ಮಾಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...