alex Certify ಮತ್ತೆ ಭೂಕಂಪನ, ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಮಂಡ್ಯ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಭೂಕಂಪನ, ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಮಂಡ್ಯ ಜನ

ಮಂಡ್ಯ: ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಸೋಮವಾರ ಭಾರಿ ಸ್ಪೋಟದ ಸದ್ದಿನೊಂದಿಗೆ ಸುಮಾರು 5ರಿಂದ 10 ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಸೋಮವಾರ ಮಧ್ಯಾಹ್ನ 3:50 ಸುಮಾರಿಗೆ ನಿಗೂಢ ಸ್ಫೋಟದ ಸದ್ದು ಕೇಳಿಸಿದೆ. ಮನೆ ಒಳಗಿದ್ದ ಪಾತ್ರೆಗಳು ಅಲುಗಾಡಿದ್ದು, ಅಂಗಡಿ, ಮುಂಗಟ್ಟುಗಳ ಬಳಿ ಭೂಮಿ ಕಂಪಿಸುವ ಅನುಭವವಾಗಿದೆ. ಕೆ. ಶೆಟ್ಟಿಹಳ್ಳಿ, ಬೆಳಗೊಳ, ಕೆಆರ್‌ಎಸ್, ಅರಕೆರೆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಕೇಳಿ ಬಂದಿದೆ.

ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ಇಂತಹುದೇ ನಿಗೂಢ ಶಬ್ಧ ಕೇಳಿಬಂದಿದ್ದು, ಕಂಪನದ ಅನುಭವವಾಗಿತ್ತು. ಮತ್ತೆ ನಿಗೂಢ ಸ್ಫೋಟ, ಕಂಪನದಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...