alex Certify ಆಸ್ತಿ ವಿಚಾರಕ್ಕೆ ಘೋರ ಕೃತ್ಯವೆಸಗಿದ ಪಾಪಿ ಪುತ್ರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ವಿಚಾರಕ್ಕೆ ಘೋರ ಕೃತ್ಯವೆಸಗಿದ ಪಾಪಿ ಪುತ್ರ ಅರೆಸ್ಟ್

ಬೆಂಗಳೂರು: ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ 1 ನೇ ಹಂತದ ಡಾಲರ್ಸ್ ಕಾಲೋನಿ ನಿವಾಸಿ ಗೋಪಿಕೃಷ್ಣ(38) ಬಂಧಿತ ಆರೋಪಿಯಾಗಿದ್ದಾನೆ.

ತಾಯಿ ಹಾಗೂ ಇಬ್ಬರು ಸಂಬಂಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ತಾಯಿಯ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದು, ನಾದಿನಿ ಗಿರಿಜಾ ಹಾಗೂ ಸಹೋದರನ ನಾಲ್ಕು ವರ್ಷದ ಪುತ್ರಿಯ ಮೇಲೆಯೂ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡಾಲರ್ಸ್ ಕಾಲೋನಿಯ ನಿವಾಸಿ ಪದ್ಮನಾಭಯ್ಯ ಸ್ವಂತ ಮನೆ ಹೊಂದಿದ್ದು, ಸಹೋದರರಾದ ಗೋಪಿಕೃಷ್ಣ ಮತ್ತು ಸೋಮೇಶ್ ನಡುವೆ ಆಸ್ತಿಪಾಲು, ಮಾರಾಟ ವಿಚಾರಕ್ಕೆ ಜಗಳ ನಡೆದಿತ್ತು. ಜನವರಿ 16 ರಂದು ಗೋಪಿಕೃಷ್ಣ ತನ್ನ ಪತ್ನಿಯೊಂದಿಗೆ ಚಾಕು ತೆಗೆದುಕೊಂಡು ಸಹೋದರನ್ನು ಹತ್ಯೆಮಾಡಲು ತೆರಳಿದ್ದಾನೆ. ಆದರೆ, ಸಹೋದರ ಮನೆಯಲ್ಲಿ ಇಲ್ಲದ ವೇಳೆ ತಾಯಿ, ಸಹೋದರ ಪತ್ನಿ, ಮಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಇವರ ಕೂಗಾಟ ಕೇಳಿ ಧಾವಿಸಿ ಬಂದ ಸ್ಥಳೀಯರು ರಕ್ಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...