alex Certify ಹಾವು ಕಡಿತ ಇನ್ನು ಘೋಷಿತ ಕಾಯಿಲೆ: ಮಾಹಿತಿ, ಚಿಕಿತ್ಸೆ ಕಡ್ಡಾಯ: ಕೇಂದ್ರ ಸರ್ಕಾರ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು ಕಡಿತ ಇನ್ನು ಘೋಷಿತ ಕಾಯಿಲೆ: ಮಾಹಿತಿ, ಚಿಕಿತ್ಸೆ ಕಡ್ಡಾಯ: ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ: ಹಾವು ಕಡಿತವನ್ನು ಘೋಷಿತ ಕಾಯಿಲೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದರೊಂದಿಗೆ ಇದುವರೆಗೂ ಇಂತಹ ಘೋಷಣೆ ಮಾಡದ ರಾಜ್ಯಗಳಿಗೂ ಹಾವು ಕಡಿತ ಘೋಷಿತ ಕಾಯಿಲೆ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಹಾವು ಕಡಿತದಿಂದ ಪ್ರತಿ ವರ್ಷ ದೇಶದಲ್ಲಿ 50,000ಕ್ಕೂ ಅಧಿಕ ಜನ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಘೋಷಣೆ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹಾವು ಕಡಿತ ಘೋಷಿತ ಕಾಯಿಲೆ ಎಂದು ಘೋಷಿಸಿದ ನಂತರ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾವು ಕಡಿತದ ಪ್ರಕರಣ, ಅದರಿಂದ ಆಗುವ ಸಾವಿನ ಕುರಿತು ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಜೊತೆಗೆ ಹಾವು ಕಡಿತದ ಸಂದರ್ಭದಲ್ಲಿ ಸಂತ್ರಸ್ತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವುದು, ಸದಾ ಇದಕ್ಕೆ ಅಗತ್ಯವಿರುವ ಔಷಧ ಸಂಗ್ರಹಿಸುವುದು ಕೂಡ ಕಡ್ಡಾಯವಾಗಿರಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು(MoHFW) ಭಾರತದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು “ಅಧಿಕೃತ ರೋಗ” ಎಂದು ಘೋಷಿಸಿದ್ದು, ಎಲ್ಲಾ ಶಂಕಿತ, ಸಂಭವನೀಯ ಹಾವು ಕಡಿತದ ಪ್ರಕರಣಗಳನ್ನು ವರದಿ ಮಾಡುವುದನ್ನು ಕಡ್ಡಾಯಗೊಳಿಸಿದೆ.

“ಹಾವು ಕಡಿತವು ಸಾರ್ವಜನಿಕ ಆರೋಗ್ಯದ ಕಾಳಜಿಯ ವಿಷಯವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಅವು ಮರಣ, ಅನಾರೋಗ್ಯ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತವೆ. ರೈತರು, ಬುಡಕಟ್ಟು ಜನಸಂಖ್ಯೆ ಇತ್ಯಾದಿಗಳು ಹೆಚ್ಚಿನ ಅಪಾಯದಲ್ಲಿವೆ” ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಪತ್ರದಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se