alex Certify ಹಾವು ಕಚ್ಚಿದರೂ ಮುಳ್ಳು ಚುಚ್ಚಿದೆ ಎಂದು ತಿಳಿದು ಮಲಗಿದ್ದ ರೈತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು ಕಚ್ಚಿದರೂ ಮುಳ್ಳು ಚುಚ್ಚಿದೆ ಎಂದು ತಿಳಿದು ಮಲಗಿದ್ದ ರೈತ ಸಾವು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಹಾವು ಕಚ್ಚಿ ರೈತರೊಬ್ಬರು ಮೃತಪಟ್ಟಿದ್ದಾರೆ.

ಗಂಗಪ್ಪ(58) ಮೃತಪಟ್ಟ ರೈತ. ಭಾನುವಾರ ಸಂಜೆ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಅವರಿಗೆ ಎರಡು ಬಾರಿ ವಿಷಕಾರಿ ಹಾವು ಕಚ್ಚಿದೆ. ಆದರೆ, ಮುಳ್ಳು ಚುಚ್ಚಿದೆ ಎಂದುಕೊಂಡು ಮನೆಯಲ್ಲಿ ಮಲಗಿದ್ದ ಅವರು ಸಾವನ್ನಪ್ಪಿದ್ದಾರೆ.

ಗಂಗಪ್ಪ ಕೆಲಸ ಮಾಡುವಾಗ ಕಾಲಿಗೆ ವಿಷಕಾರಿ ಹಾವು ಎರಡು ಬಾರಿ ಕಚ್ಚಿದ್ದು, ಅವರಿಗೆ ಕಚ್ಚಿದ್ದ ಹಾವು ಕಾಣಿಸಿಲ್ಲ. ಹೀಗಾಗಿ ಮುಳ್ಳು ಚುಚ್ಚಿರಬಹುದು ಎಂದು ಮನೆಗೆ ಮರಳಿದ್ದಾರೆ. ಕಾಲಿಗೆ ಮುಳ್ಳು ಚುಚ್ಚಿದ್ದರಿಂದ ಸುಸ್ತಾಗುತ್ತಿದೆ ಎಂದು ಮನೆಯವರಿಗೆ ಹೇಳಿದ ಗಂಗಪ್ಪ ಊಟ ಮಾಡಿ ನಿದ್ದೆಗೆ ಜಾರಿದ್ದು, ಹಾವಿನ ವಿಷ ಏರಿ ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...