alex Certify ಶಿಲ್ಪಕಲೆಯ ಸಿರಿ ಬೇಲೂರು ಚೆನ್ನಕೇಶವ ದೇವಾಲಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಲ್ಪಕಲೆಯ ಸಿರಿ ಬೇಲೂರು ಚೆನ್ನಕೇಶವ ದೇವಾಲಯ….!

ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯವು ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪದ ಅದ್ಭುತ ಪ್ರತೀಕ. 12ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನನಿಂದ ನಿರ್ಮಾಣಗೊಂಡ ಈ ದೇವಾಲಯವು ಕಲೆ, ಇತಿಹಾಸ ಮತ್ತು ಸಂಸ್ಕೃತಿಯ ಸಂಗಮವಾಗಿದೆ.

ಹೊಯ್ಸಳ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಈ ದೇವಾಲಯದ ಗೋಡೆಗಳ ಮೇಲೆ ಸಂಕೀರ್ಣವಾದ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಕಾಣಬಹುದು. ದೇವಾಲಯದ ಒಳಭಾಗದಲ್ಲಿರುವ ಕಂಬಗಳು ಮತ್ತು ಸೀಲಿಂಗ್‌ಗಳು ಅದ್ಭುತವಾದ ಕೆತ್ತನೆಗಳನ್ನು ಹೊಂದಿವೆ. ಇಲ್ಲಿನ ಶಿಲಾಬಾಲಿಕೆಯರ ಶಿಲ್ಪಗಳು ಪ್ರಪಂಚದಾದ್ಯಂತ ಪ್ರಸಿದ್ದವಾಗಿವೆ.

1117 CE ರಲ್ಲಿ ವಿಷ್ಣುವರ್ಧನ ರಾಜನು ಚೋಳರ ವಿರುದ್ಧದ ವಿಜಯದ ಸ್ಮರಣಾರ್ಥವಾಗಿ ಈ ದೇವಾಲಯವನ್ನು ನಿರ್ಮಿಸಿದನು. ದೇವಾಲಯದ ನಿರ್ಮಾಣವು ಸುಮಾರು 103 ವರ್ಷಗಳನ್ನು ತೆಗೆದುಕೊಂಡಿತು. ಈ ದೇವಾಲಯವು ಹಲವಾರು ಬಾರಿ ಯುದ್ಧಗಳಲ್ಲಿ ಹಾನಿಗೊಳಗಾಯಿತು ಮತ್ತು ನಂತರ ಅದನ್ನು ದುರಸ್ತಿ ಮಾಡಲಾಯಿತು.

ಹೊಯ್ಸಳರ ಕಾಲದಲ್ಲಿ ಪ್ರಮುಖ ಸ್ಥಳವಾಗಿದ್ದ ಬೇಲೂರಿನಲ್ಲಿ 443.5 ಅಡಿ ಉದ್ದ, 396 ಅಡಿ ಅಗಲದ ಅಂಗಳದ ಮಧ್ಯೆ ಚೆನ್ನಕೇಶವ ದೇವಾಲಯ ಇದೆ. ನಕ್ಷತ್ರ ಆಕಾರದ 4 ಅಡಿ ಎತ್ತರದ ಜಗುಲಿಯ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ.

ದೇವಾಲಯದಲ್ಲಿ ದ್ರಾವಿಡ ಶೈಲಿಯ ಗೋಪುರಗಳಿವೆ. ದೇವಾಲಯಕ್ಕೆ 3 ಬಾಗಿಲು ಇದ್ದು, ನವರಂಗ ಬಾಗಿಲ ಇಕ್ಕೆಲಗಳಲ್ಲಿ ಸಳನು ಹುಲಿಯನ್ನು ಕೊಂದ ಚಿತ್ರಣವಿದೆ. ಇಲ್ಲಿನ ಜಾಲರಂಧ್ರಗಳು ವೈವಿಧ್ಯತೆಯಿಂದ ಕೂಡಿವೆ. ಚೆನ್ನಕೇಶವ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ, ಸುತ್ತಲೂ ಮನಮೋಹಕವಾಗಿ ಕೆತ್ತಿರುವ ರಾಮಾಯಣ, ಮಹಾಭಾರತದ ಕಥಾ ಭಾಗಗಳು.

ದೇವಾಲಯದ ಸುತ್ತಲೂ ಕಡೆದಿರುವ ಶಿಲಾಬಾಲಿಕೆಯರ ಚಿತ್ರಣಗಳು ವಿಶ್ವ ಪ್ರಸಿದ್ಧಿಯಾಗಿವೆ. ಶಿಲ್ಪಿಗಳ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ. ಚೆನ್ನಕೇಶವ ದೇವಾಲಯದ ಜೊತೆಗೆ ಕಪ್ಪೆಚನ್ನಿಗರಾಯನ ಗುಡಿ, ವೀರನಾರಾಯಣ ದೇವಸ್ಥಾನಗಳು ಕೂಡ ಅದ್ಭುತವಾದ ಶಿಲ್ಪಕಲಾ ವೈಭವವನ್ನು ಮೈಗೂಡಿಸಿಕೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮುಖ್ಯ ದೇವಾಲಯವು ಚೆನ್ನಕೇಶವನಿಗೆ ಸಮರ್ಪಿತವಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಇತರ ಸಣ್ಣ ದೇವಾಲಯಗಳು ಸಹ ಇವೆ. ದೇವಾಲಯದ ಗೋಡೆಗಳ ಮೇಲಿನ ಶಿಲ್ಪಗಳು ಹಿಂದೂ ಪುರಾಣಗಳ ಕಥೆಗಳನ್ನು ಚಿತ್ರಿಸುತ್ತವೆ.

ವಿಶ್ವವಿಖ್ಯಾತ ಚೆನ್ನಕೇಶವ ದೇವಾಲಯ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಬೇಲೂರು ಪ್ರಮುಖವಾಗಿದೆ.

ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಬೇಲೂರಿಗೆ ಭೇಟಿ ನೀಡಲು ಉತ್ತಮ ಸಮಯ. ಬೇಲೂರು ಹಾಸನದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಬೇಲೂರಿಗೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಹತ್ತಿರದ ರೈಲು ನಿಲ್ದಾಣ ಹಾಸನದಲ್ಲಿದೆ.

ಇಲ್ಲಿನ ಶಿಲ್ಪಕಲೆಗಳು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಲೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಆಸಕ್ತಿಕರವಾಗಿರುವವರಿಗೆ ಬೇಲೂರು ಚೆನ್ನಕೇಶವ ದೇವಾಲಯ ಒಂದು ಅದ್ಭುತ ಸ್ಥಳವಾಗಿದೆ.

ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ. ನೀವು ಒಮ್ಮೆ ವಿಶ್ವ ಖ್ಯಾತಿಯ ಬೇಲೂರು ಚೆನ್ನಕೇಶವ ದೇವಾಲಯವನ್ನು ನೋಡಿ ಬನ್ನಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak rychle a jednoduše vylepšit chuť Jak rozpoznat infikované hovězí, kuřecí a vepřové maso: Jak správně skladovat vlašské ořechy v chladničce, Jak dlouhodobě skladovat maso bez lednice: 10 ověřených Obdivujte, co Proč přidávat do prádla