alex Certify ‘ಬಂಡೆ’ ಕೆಳಗೆ ಡೈನಾಮೈಟ್ ಇಟ್ಟು ಹೀನ ರಾಜಕಾರಣ: ಸಿದ್ಧರಾಮಯ್ಯಗೆ HDK ಟಾಂಗ್, ಪ್ರಶ್ನೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಂಡೆ’ ಕೆಳಗೆ ಡೈನಾಮೈಟ್ ಇಟ್ಟು ಹೀನ ರಾಜಕಾರಣ: ಸಿದ್ಧರಾಮಯ್ಯಗೆ HDK ಟಾಂಗ್, ಪ್ರಶ್ನೆಗಳ ಸುರಿಮಳೆ

ನಾನು ಯಾವತ್ತೂ ಜೆಡಿಎಸ್ ನವರ ಮನೆಬಾಗಿಲಿಗೆ ಹೋಗಿಲ್ಲ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದು ಕಟ್ಟುವುದು ಮನುಷ್ಯತ್ವ, ಕೆಡವುದು ರಾಕ್ಷಸತ್ವ. ನಿಮಗೆ ಕೆಡವುದು ಒಂದೇ ಗೊತ್ತು. ಕಟ್ಟುವುದು ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದವರು ಕಾಂಗ್ರೆಸ್ ನಾಯಕರು. ಸರ್ಕಾರದ ನೇತೃತ್ವ ವಹಿಸಿ ಎಂದು ಕಾಂಗ್ರೆಸ್ ನವರು ಕೇಳಿದ್ದರು. ಆದರೆ, ಪಕ್ಷದ ನಿರ್ಧಾರಕ್ಕೆ ನಿಮಗೂ ಸಂಬಂಧವಿಲ್ಲವೇ ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಜೆಡಿಎಸ್ ನವರ ಮನೆ ಬಾಗಿಲಿಗೆ ಹೋಗಿಲ್ಲ ಎಂದು ಹೇಳುತ್ತೀರಿ. ನಿಮ್ಮನ್ನು ಕರೆದವರು ಯಾರು? ನಾವೇನು ಎಲೆ ಅಡಿಕೆ ಕೊಟ್ಟು ಆಹ್ವಾನ ಕೊಟ್ಟಿದ್ದೇವೆಯೇ? ನಮ್ಮ ಮನೆಗೆ ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದರು. ಆಗ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು? ಇದನ್ನೆಲ್ಲ ಮಾಡಿದ್ದು ಯಾರು ಮಿಸ್ಟರ್ ಟರ್ಮಿನೇಟರ್? ‘ಬಂಡೆ’ಯ ಕೆಳಗೆ ಡೈನಾಮೈಟ್  ಇಡುತ್ತಿರುವ ಅನೈತಿಕ, ನೀಚ, ನಿಕೃಷ್ಟ ಹೀನ ರಾಜಕಾರಣಕ್ಕೆ ನಾಂದಿ ಹಾಡಿದವರು ಯಾರು? ಪರಮಪಾತಕ ಪರಾಕಾಷ್ಠೆ ಯಾವುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವರಿಷ್ಠರು ತಂದ ಸರ್ಕಾರವನ್ನೇ ತೆಗೆದು ಬಿಜೆಪಿ ಸರ್ಕಾರ ಬರಲು ಕಾರಣವಾದರೂ ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರ್ಕಾರ ಬರಲು ಶಾಸಕರ ತಂಡ ರೆಡಿ ಮಾಡಿದವರು ಯಾರು? ಜೆಡಿಎಸ್ ಬಿಜೆಪಿಯ ಬಿ ಟೀಂ ಎನ್ನುತ್ತೀರಿ. ಹಾಗಾದರೆ ಆಡಳಿತ ಪಕ್ಷದಲ್ಲೇ ಕುಳಿತ ವಿರೋಧಿಗಳೊಂದಿಗೆ ಕುಮ್ಮಕ್ಕಿನಿಂದ ಬೆನ್ನಿಗಿರಿದ ಬ್ರೂಟಸ್ ಯಾರು? ಮೈತ್ರಿ ಸರ್ಕಾರಕ್ಕೆ ಮೊದಲ ದಿನದಿಂದಲೇ ಮುಹೂರ್ತ ಇಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...