alex Certify ಸಿದ್ಧರಾಮಯ್ಯರಿಗೆ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ ಚಾಮುಂಡೇಶ್ವರಿ ಸೋಲು, ಇನ್ನೂ ಮರೆಯದ ಮಾಜಿ ಸಿಎಂ ಮತ್ತೆ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ಧರಾಮಯ್ಯರಿಗೆ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ ಚಾಮುಂಡೇಶ್ವರಿ ಸೋಲು, ಇನ್ನೂ ಮರೆಯದ ಮಾಜಿ ಸಿಎಂ ಮತ್ತೆ ಗರಂ

ಮೈಸೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷನಾಯಕ ಸಿದ್ದರಾಮಯ್ಯ ಅವರು ಇನ್ನೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಮರೆತಿಲ್ಲ. ಇಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ನೆನಪಿಸಿಕೊಂಡು ಗರಂ ಆಗಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರಿಗೌಡಗೆ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಲು ಬಂದ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಸಿದ್ದರಾಮಯ್ಯ ಮಾಸ್ಕ್ ತೆಗೆದು, ಎಲ್ಲರೂ ಸೇರಿ ನನ್ನನ್ನು ಸೋಲಿಸಿದ್ದೀರಿ. ನಾಚಿಕೆ ಆಗಲ್ಲವೇ ನಿಮಗೆ ಎಂದು ಬೈದು ಕಳುಹಿಸಿದ್ದಾರೆ. ಮೈಸೂರಿನ ಸಿದ್ಧರಾಮಯ್ಯನವರ ನಿವಾಸದ ಮುಂದೆ ಘಟನೆ ನಡೆದಿದೆ.

ಎಲ್ಲರೂ ನನ್ನನ್ನು ಸೋಲಿಸಿ ಈಗ ಟಿಕೆಟ್ ಕೇಳಲು ಬಂದಿದ್ದೀರಾ? ನಾಚಿಕೆಯಾಗುವುದಿಲ್ಲವೆ? ನಿಮ್ಮ ಆತ್ಮ ಮುಟ್ಟಿಕೊಂಡು ಹೇಳಿ ನನ್ನನ್ನು ಸೋಲಿಸಲಿಲ್ಲ ಎಂದು? ನಡೀರಿ ನಡೀರಿ, ಯಾರಿಗೆ ಟಿಕೆಟ್ ಕೊಡಬೇಕಿದೆ ಎಂಬುದು ಗೊತ್ತಿದೆ ಎಂದು ಕೆ. ಮರಿಗೌಡ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ಧರಾಮಯ್ಯ ಅವರ ನಿವಾಸದ ಬಳಿ ಸೇರಿದ ಮರಿಗೌಡ ಬೆಂಬಲಿಗರು ಕಾರ್ ಅಡ್ಡಗಟ್ಟಿ ಮರೀಗೌಡರಿಗೆ ವಿಧಾನಪರಿಷತ್ ಟಿಕೆಟ್ ಕೊಡುವಂತೆ ಕೇಳಿದಾಗ, ಸಿಟ್ಟಾದ ಸಿದ್ದರಾಮಯ್ಯ ಅವರು ಮಾಸ್ಕ್ ತೆಗೆದು, ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದು ಗೊತ್ತಿದೆ. ನಡೀರಿ ಎಂದು ಕಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...