ಔರೈಯಾ: ಮದುವೆಯಾದ ಎರಡು ವಾರಕ್ಕೆ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
22 ವರ್ಷದ ಮಹಿಳೆ ತನ್ನ ಪ್ರಿಯಕರನೊಂದಿಗೆ ಕೊಲೆಗೆ ಸ್ಕೆಚ್ ಹಾಕಿದ್ದಳು ಎಂದು ವರದಿಯಾಗಿದೆ. ದೇಶಾದ್ಯಂತ ಆಘಾತಗಳನ್ನು ಉಂಟುಮಾಡಿದ ಮೀರತ್ ಕೊಲೆ ಪ್ರಕರಣದ ಒಂದು ವಾರದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಎಂದು ಗುರುತಿಸಲಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಮಾರ್ಚ್ 19 ರಂದು ವ್ಯಕ್ತಿಯೊಬ್ಬರು ಹೊಲದಲ್ಲಿ ಗಾಯಗೊಂಡು ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಸಹರ್ ಎಸ್ಎಚ್ಒ ಪಂಕಜ್ ಮಿಶ್ರಾ ಸೋಮವಾರ ತಿಳಿಸಿದ್ದಾರೆ.
ಗಾಯಗೊಂಡ ದಿಲೀಪ್ ಯಾದವ್ ಅವರನ್ನು ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ನಂತರ ಆಗ್ರಾಕ್ಕೆ ಕರೆದೊಯ್ಯಲಾಯಿತು ಎಂದು ವರದಿ ತಿಳಿಸಿದೆ. ಮತ್ತು ಅವರ ಕುಟುಂಬವು ಮಾರ್ಚ್ 20 ರಂದು ಅವರನ್ನು ಔರೈಯಾದ ಆಸ್ಪತ್ರೆಗೆ ದಾಖಲಿಸಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮಾರ್ಚ್ 21 ರಂದು ನಿಧನರಾದರು.
ಅನುರಾಗ್ ಅಲಿಯಾಸ್ ಮನೋಜ್ ಗುತ್ತಿಗೆ ಕೊಲೆಗಾರ ರಾಮ್ಜಿ ಚುವಾಧಾರಿಯನ್ನು ನೇಮಿಸಿಕೊಂಡಿದ್ದನು. ಪ್ರಗತಿಯ ಸೂಚನೆಯ ಮೇರೆಗೆ ದಿಲೀಪ್ ನನ್ನು ಕೊಲ್ಲಲು ಎರಡು ಲಕ್ಷರೂ. ಪಡೆದುಕೊಂಡಿದ್ದನು. ಪೊಲೀಸರು ರಾಮ್ಜ್ ನಗರ ಪ್ರದೇಶದ ಬಳಿ ಅಳವಡಿಸಲಾದ ಸಿಸಿಟಿವಿಯನ್ನು ಸ್ಕ್ಯಾನ್ ಮಾಡಿ ಆರೋಪಿಗಳನ್ನು ಗುರುತಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
औरैया में पत्नी ने प्रेमी संग मिल कराई पति की हत्या
औरैया में मे पत्नी ने प्रेमी संग मिलकर अपने ही पति की सुपारी देकर हत्या करवा दी, पुलिस ने घटना का खुलासा करते हुए पत्नी, प्रेमी और सुपारी किलर को गिरफ्तार किया…@auraiyapolice @Uppolice pic.twitter.com/oL2qXw4yIj
— Gaurav Kumar (@gaurav1307kumar) March 24, 2025