alex Certify BIG NEWS: ಮುಂದುವರಿದ ಎಂಇಎಸ್, ಶಿವಸೇನೆ ಪುಂಡಾಟ; ಸಾರಿಗೆ ಬಸ್ ಗಳಿಗೆ ಮಸಿ ಬಳಿದು ಕಿಡಿ; ಕನ್ನಡಿಗರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಾರ್ಯಕರ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂದುವರಿದ ಎಂಇಎಸ್, ಶಿವಸೇನೆ ಪುಂಡಾಟ; ಸಾರಿಗೆ ಬಸ್ ಗಳಿಗೆ ಮಸಿ ಬಳಿದು ಕಿಡಿ; ಕನ್ನಡಿಗರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಾರ್ಯಕರ್ತರು

ಮುಂಬೈ: ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟ ಮುಂದುವರೆದಿದೆ. ಸಾರಿಗೆ ಬಸ್ ಗಳನ್ನು ತಡೆದು ಕಪ್ಪು ಮಸಿ ಬಳಿದು, ಚಾಲಕನಿಗೂ ಹಿಂಸೆ ಕೊಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬೈನಿಂದ ಕಲಬುರ್ಗಿಗೆ ಆಗಮಿಸುತ್ತಿದ್ದ ಸಾರಿಗೆ ಬಸ್ ನ್ನು ತಡೆದ ಎಂಇಎಸ್ ಪುಂಡರು, ಬಸ್ ಮೇಲೆ ಕಪ್ಪು ಮಸಿ ಬಳಿದು ಜೈ ಶಿವಾಜಿ ಎಂದು ಬರೆದಿದ್ದಾರೆ. ಅಲ್ಲದೇ ಬಸ್ ಚಾಲಕನ ಕೈಯಲ್ಲಿ ಬಲವಂತವಾಗಿ ಎಂಇಎಸ್ ಬಾವುಟ ಕೊಟ್ಟು, ಜೈ ಶಿವಾಜಿ ಎಂದು ಘೋಷಣೆ ಕೂಗಿಸಿದ್ದಾರೆ.

ಟೆಸ್ಲಾ ಸೇವೆಯಿಂದ ಅತೃಪ್ತಗೊಂಡು ಕಾರನ್ನೇ ಸ್ಪೋಟಿಸಿದ ಮಾಲೀಕ

ಇನ್ನೊಂದೆಡೆ ಶಿವಸೇನೆಯ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್ ಮನೆಗೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ತೆರಳಿದ ಶಿವಸೇನೆ ಪುಂಡರು, ಶಿವಕುಮಾರ್ ಅವರ ಕೊರಳುಪಟ್ಟಿ ಹಿಡಿದು ಥಳಿಸಿದ್ದಾರೆ. ಅಲ್ಲದೇ ಮರಾಠಿಯಲ್ಲಿ ನಿಂದಿಸುತ್ತಾ, ಕ್ಷಮೆ ಯಾಚಿಸುವಂತೆ ಹೇಳಿದ್ದಾರೆ.

ಮನೆಗೆ ನುಗ್ಗಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ದೃಶ್ಯವನ್ನು ಶಿವಸೇನೆ ಕಾರ್ಯಕರ್ತರೇ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...