alex Certify ಕಾರ್ಮಿಕನ ಮೇಲೆ ಹರಿದುಹೋದ ರೈಲು: ಸ್ಥಳದಲ್ಲೇ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕನ ಮೇಲೆ ಹರಿದುಹೋದ ರೈಲು: ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ಸೌದೆ ಆರಿಸಲು ಹೋಗಿದ್ದ ಕಾರ್ಮಿಕ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಬಳಿ ನಡೆದಿದೆ.

ರುದ್ರಪ್ಪ (68) ಮೃತ ದುರ್ದೈವಿ. ರೈಲ್ವೆ ಹಳಿ ಬಳಿ ಸೌದೆ ಆರಿಸುತ್ತಿದ್ದ ವೇಳೆ ರೈಲು ಬಂದಿದ್ದು ಗೊತ್ತಾಗಿಲ್ಲ. ವೇಗವಾಗಿ ಬಂದ ಮೈಸೂರು-ತಾಳಗುಪ್ಪ ರೈಲು ರುದ್ರಪ್ಪ ಮೇಲೆ ಹರಿದು ಹೋಗಿದೆ. ರುದ್ರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ರುದ್ರಪ್ಪ ಕಿವುಡು ಹಾಗೂ ಕುಣ್ಣು ಮಂಜಿನಿಂದ ಬಳಲುತ್ತಿದ್ದರು. ಹಾಗಾಗಿ ರೈಲಿನ ಶಬ್ಧವೂ ಕೇಳಿಲ್ಲ, ರೈಲು ಬಂದಿದ್ದು ಕಾಣದೇ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...