alex Certify BREAKING : ಬೆಂಗಳೂರಿನ ಜಿ.ಟಿ ಮಾಲ್ 7 ದಿನ ಬಂದ್ ; ಸಚಿವ ಭೈರತಿ ಸುರೇಶ್ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿನ ಜಿ.ಟಿ ಮಾಲ್ 7 ದಿನ ಬಂದ್ ; ಸಚಿವ ಭೈರತಿ ಸುರೇಶ್ ಘೋಷಣೆ

ಬೆಂಗಳೂರು : ರೈತನಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜಿ.ಟಿ ಮಾಲ್ 7 ದಿನ ಬಂದ್ ಆಗಲಿದೆ ಎಂದು ಸದನದಲ್ಲಿ ಸಚಿವ ಭೈರತಿ ಸುರೇಶ್ ಘೋಷಣೆ ಮಾಡಿದ್ದಾರೆ.

ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಮುಚ್ಚಲು ಬಹುತೇಕ ಶಾಸಕರು ಒತ್ತಾಯ ಮಾಡಿರುವುದರಿಂದ 7 ದಿನ ಜಿಟಿ ಮಾಲ್ ಬಂದ್ ಮಾಡಿಸುತ್ತೇವೆ. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದೇನೆ, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಎಂದು ಸದನದಲ್ಲಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.

ಘಟನೆ ಹಿನ್ನೆಲೆ

ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬುವರ ತಂದೆ ಮೂಲತಃ ರೈತರಾಗಿದ್ದು, ಬೆಂಗಳೂರಿಗೆ ಮಗನ ಮನೆ ( ನಾಗರಾಜ್) ಮನೆಗೆ ಬಂದಿದ್ದರು. ಅಂತೆಯೇ ತಂದೆಯನ್ನು ಸಿನಿಮಾ ನೋಡಲು ಮಗ ನಾಗರಾಜ್ ಜಿಟಿ ಮಾಲ್ ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ಉಟ್ಟಿದ್ದಾರೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಾರೆ. ಎಷ್ಟೇ ವಾದ ಮಾಡಿದ್ರೂ ಭದ್ರತಾ ಸಿಬ್ಬಂದಿ ಮಾಲ್ ನ ಒಳಗೆ ಬಿಡಲಿಲ್ಲ. ಇದರಿಂದ ನೊಂದ ನಾಗರಾಜ್ ವಿಡಿಯೋ ಮಾಡಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶಗೊಂಡು ಮಾಲ್ ಗೆ ಮುತ್ತಿಗೆ ಹಾಕಿದ್ದಾರೆ.

ಘಟನೆಯನ್ನು ವಿರೋಧಿಸಿ ಕನ್ನಡ ಸಂಘಟನೆಯ ಕಾರ್ಯಕರ್ತರು ಪಂಚೆಯುಟ್ಟು ಬೆಳಗ್ಗೆ ಮಾಲ್ ಗೆ ಜಮಾಯಿಸಿದ್ದರು. ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಹಾಗೂ ಮತ್ತಿತರರು ಪಂಚೆ ಧರಿಸಿ ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...