![](https://kannadadunia.com/wp-content/uploads/2022/01/210276-untitled-design-1024x1024.jpg)
ಈ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರೊ ತೆಲಂಗಾಣದ ನೇಕಾರರೊಬ್ಬರು, ಬೆಂಕಿಪಟ್ಟಣೊದೊಳಗೆ ಮಡಚಿ ಇಡಬಹುದಾದ ಸೀರೆಯನ್ನ ನೇಯ್ದಿದ್ದಾರೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನಲ್ಲ ವಿಜಯ್ ಅವರು ಕೈ ಮಗ್ಗದಲ್ಲಿ ಈ ಸೀರೆಯನ್ನ ನೇಯ್ದಿದ್ದಾರೆ. ಮಂಗಳವಾರ ಈ ವಿಭಿನ್ನ ಸೀರೆಯನ್ನ ತೆಲಂಗಾಣದ ಸಚಿವರಾದ ಕೆಟಿ ರಾಮರಾವ್, ಪಿ ಸಬಿತಾ ಇಂದ್ರರೆಡ್ಡಿ, ವಿ ಶ್ರೀನಿವಾಸ್ ಗೌಡ್ ಮತ್ತು ಎರ್ರಬೆಲ್ಲಿ ದಯಾಕರ್ ರಾವ್ ಅವರ ಮುಂದೆ ಪ್ರದರ್ಶಿಸಲಾಯಿತು. ನಂತರ ವಿಜಯ್ ರವರು ಈ ಸೀರೆಯನ್ನ, ಸಬಿತಾ ಇಂದ್ರರೆಡ್ಡಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿದು ಬಂದಿದೆ.
ಬೆಂಕಿಪಟ್ಟಣದಲ್ಲಿ ಇಡಬಹುದಾದ ಈ ಸೀರೆಯನ್ನ ಕೈಯಿಂದ ನೇಯಲು ಆರು ದಿನಗಳಾಗುತ್ತವೆ. ಆದರೆ ಯಂತ್ರದ ಸಹಾಯದಿಂದ ನೇಯ್ದರೆ ಎರಡು ದಿನಗಳು ಹಿಡಿಯುತ್ತದೆ ಎಂದು ವಿಜಯ್ ಹೇಳಿದ್ದಾರೆ.