alex Certify ‘ಕಾಗದ’ ಚಿತ್ರತಂಡಕ್ಕೆ ಶುಭ ಹಾರೈಸಿದ ಸ್ಯಾಂಡಲ್ ವುಡ್ ತಾರೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಗದ’ ಚಿತ್ರತಂಡಕ್ಕೆ ಶುಭ ಹಾರೈಸಿದ ಸ್ಯಾಂಡಲ್ ವುಡ್ ತಾರೆಯರು

ರಂಜಿತ್ ನಿರ್ದೇಶನದ ಕಾಗದ ಚಿತ್ರದ ಟ್ರೈಲರ್ ನಿನ್ನೆಯಷ್ಟೇ  ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಸ್ಯಾಂಡಲ್ ವುಡ್ ನ ಹಲವಾರು ನಟ ನಟಿಯರು ಈ ಟ್ರೈಲರ್ ವೀಕ್ಷಿಸಿದ್ದು,  ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರಮೇಶ್ ಅರವಿಂದ್ ಸೇರಿದಂತೆ ಶ್ರೀ ಮುರಳಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಆಂಕರ್ ಅನುಶ್ರೀ ವಿಡಿಯೋ ಮುಖಾಂತರ ಶುಭ ಹಾರೈಸುವ ಮೂಲಕ ಈ ಚಿತ್ರಕ್ಕೆ  ಸಾತ್ ನೀಡಿದ್ದಾರೆ.

ಟೀನೇಜ್ ಲವ್ ಸ್ಟೋರಿ  ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆದಿತ್ಯ ಕರೆಗೌಡ ಮತ್ತು ಅಂಕಿತ ಜೈರಾಮ್ ಪ್ರಮುಖ ಪಾತ್ರದಲ್ಲಿದ್ದು, ನೇಹಾ ಪಾಟೀಲ್ , ಬಾಲ ರಾಜವಾದಡಿ, ಅಶ್ವಥ್ ನೀನಾಸಂ, ಮಾತಾ ಕೋಪಲ, ಶಿವಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್, ತೇಜಶ್ರೀ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಪವನ್ ಗೌಡ ಅವರ ಸಂಕಲನ ವೇಣುಸ್ ನಾಗರಾಜ್ ಮೂರ್ತಿ  ಛಾಯಾಗ್ರಹಣವಿದೆ. ಅಮ್ಮ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿದ್ದಾರೆ. ಮುಂದಿನ ತಿಂಗಳು ಜುಲೈ ನಲ್ಲಿ ಈ ಸಿನಿಮಾ ತೆರೆ ಮೇಲೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...