alex Certify ಸಮಂತಾ-ನಾಗ ಚೈತನ್ಯ ವಿರಸದ ನಡುವೆ ಸದ್ದು ಮಾಡಿದ ಅಮೀರ್‌ ಖಾನ್‌ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಂತಾ-ನಾಗ ಚೈತನ್ಯ ವಿರಸದ ನಡುವೆ ಸದ್ದು ಮಾಡಿದ ಅಮೀರ್‌ ಖಾನ್‌ ಮಾತು

ವಿಚ್ಚೇದನದ ವದಂತಿಗಳಿಂದ ಸುದ್ದಿಯಲ್ಲಿರುವ ತೆಲುಗು ಚಿತ್ರರಂಗದ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅಕ್ಕಿನೇನಿ ಹೋದಲ್ಲಿ ಬಂದಲ್ಲೆಲ್ಲಾ ಈ ಕುರಿತ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡುವಂತೆ ಆಗಿದೆ.

ಈ ವಿಚಾರವಾಗಿ ಖುದ್ದು ಸಮಂತಾ ಅಥವಾ ನಾಗ ಚೈತನ್ಯ ಯಾವುದೇ ಸ್ಪಷ್ಟನೆ ಕೊಡದೇ ಇದ್ದರೂ ವದಂತಿಗಳು ಮಾತ್ರ ದೊಡ್ಡದಾಗಿ ಬೆಳೆದಿದ್ದು, ತಾರಾ ದಂಪತಿಗಳ ನಡವೆ ಎಲ್ಲವೂ ನೆಟ್ಟಗಿಲ್ಲದೇ ಇರುವ ಕಾರಣ ವಿಚ್ಛೇದನ ಗ್ಯಾರಂಟಿ ಎಂಬೆಲ್ಲಾ ಮಾತುಗಳು ಹರಿದಾಡುತ್ತಿವೆ.

ಆಮೀರ್‌ ಖಾನ್ ಹಾಗೂ ಕರೀನಾ ಕಪೂರ್‌ರ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ನಾಗ ಚೈತನ್ಯ ಬಾಲಿವುಡ್‌ಗೂ ಎಂಟ್ರಿ ಕೊಡಲಿದ್ದಾರೆ. ಈ ನಡುವೆ ಆಮೀರ್‌ ನಾಗ ಚೈತನ್ಯ ಬೆಂಬಲಕ್ಕೆ ನಿಂತಿದ್ದಾರೆ.

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ’ಲವ್‌ ಸ್ಟೋರಿ’ ಚಿತ್ರದ ಬಿಡುಗಡೆ ಪೂರ್ವ ಸಮಾರಂಭವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಆಮೀರ್‌, “ಸಮಾರಂಭದ ಭಾಗವಾಗಿ ನಾನು ಬರಬಹುದೇ ಎಂದು ನಾನು ನಾಗ ಚೈತನ್ಯರನ್ನು ಕೇಳಿದೆ. ಈ ಕಾರಣದಿಂದ ಸಂಘಟಕರು ನನ್ನನ್ನು ಬಲವಂತದಿಂದ ಆಹ್ವಾನಿಸುವಂತೆ ಆಗಿದೆ. ನಾನು ಏನೋ ಮುಖ್ಯ ವಿಚಾರ ಹೇಳಲು ಇಲ್ಲಿಗೆ ಬಂದಿದ್ದೇನೆ.

ಚಿತ್ರವೊಂದಕ್ಕೆ ನಾವಿಬ್ಬರೂ ಕೆಲಸ ಮಾಡುತ್ತಿದ್ದೇವೆ. ನನಗೆ ನಾಗ ಚೈತನ್ಯ ಜೊತೆಗೆ ಕೆಲವೊಂದು ವಿಶೇಷ ಅನುಭವಗಳಾಗಿದ್ದು, ಅವರ ಹೆತ್ತವರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಅವರ ತಂದೆ ಹಾಗೂ ತಾಯಿಯ ದೂರವಾಣಿ ಸಂಖ್ಯೆಗಳನ್ನು ಪಡೆದಿದ್ದೇನೆ. ಆದರೆ ನಾನು ಅವರ ಅಭಿಮಾನಿಗಳಿಗೂ ಏನೋ ವಿಷಯ ಹೇಳಬೇಕೆಂದು ಇಲ್ಲಿಗೆ ಬಂದಿದ್ದೇನೆ. ಕೇವಲ ಒಬ್ಬ ನಟ ಹಾಗೂ ಕಲಾವಿದ ಮಾತ್ರವಲ್ಲದೇ ಸಹೃದಯಿ ವ್ಯಕ್ತಿಯೂ ಆಗಿರುವ ನಾಗ ತಮ್ಮ ಸ್ವಭಾವದಿಂದ ಎಲ್ಲರ ಹೃದಯ ಗೆಲ್ಲುತ್ತಾರೆ,” ಎಂದಿದ್ದಾರೆ.

ಭಾರತ್‌ ಬಂದ್: ಕಿಸಾನ್ ಮೋರ್ಚಾ ಬೆಂಬಲಕ್ಕೆ ನಿಂತ ಕಾಂಗ್ರೆಸ್‌, ಟಿಡಿಪಿ ಮತ್ತು ಎಡರಂಗ

ಈ ಕುರಿತು ಮಾತನಾಡಿದ ನಾಗ ಚೈತನ್ಯ, “ಆಮೀರ್‌ ಇಲ್ಲಿಗೆ ಬರಬೇಕಾಗಿರಲಿಲ್ಲ, ಹಾಗೂ ಅವರು ಹೇಳಿದ್ದನ್ನೆಲ್ಲಾ ಹೇಳಬೇಕಾಗಿಯೂ ಇರಲಿಲ್ಲ. ಅದು ಅನಿರೀಕ್ಷಿತವಾಗಿತ್ತು. ನನ್ನ ಹೊಸ ಚಿತ್ರ ಲವ್‌ಸ್ಟೋರಿಯ ಟ್ರೇಲರ್‌ ನೋಡಿದ ಆಮೀರ್‌ ಸರ್‌‌ ಖುದ್ದು ಇಲ್ಲಿಗೆ ಬಂದು ತಂಡವನ್ನು ಬೆಂಬಲಿಸಲು ಇಷ್ಟ ಪಟ್ಟರು. ಅವರನ್ನು ಈ ಸಮಾರಂಭದಲ್ಲಿ ಕಂಡಿದ್ದು ಭಾರೀ ಖುಷಿಯಾಯಿತು. ಅವರು ಬಹಳ ಕುರಣಾಮಯಿ. ಲಾಲ್‌ ಸಿಂಗ್ ಚಡ್ಡಾ ಶೂಟಿಂಗ್ ವೇಳೆ ಅವರಿಂದ ನನಗೆ ಸಿಕ್ಕ ಕಾಳಜಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ,” ಎಂದು ಹೇಳಿಕೊಂಡಿದ್ದಾರೆ.

ಟಾಲಿವುಡ್‌ನ ಅತ್ಯಂತ ಅಡೋರಬಲ್ ಕಪಲ್ ಆಗಿದ್ದ ಚೈತನ್ಯ ಹಾಗೂ ಸಮಂತಾ ನಡುವೆ ಭಿನ್ನಭಿಪ್ರಾಯಗಳು ಕಾಣಿಸಿಕೊಂಡಿರುವ ಕಾರಣ ಇಬ್ಬರು ಸದ್ಯಕ್ಕೆ ಜೊತೆಯಾಗಿ ಇಲ್ಲ. ತಮ್ಮ ನಡುವಿನ ಪ್ರಸಕ್ತ ಸಂಬಂಧದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಇಬ್ಬರೂ ಮೌನವನ್ನೇ ಉತ್ತರವನ್ನಾಗಿಸಿಕೊಂಡಿದ್ದಾರೆ.

ಬಹಳಷ್ಟು ಫೋಟೋಶೂಟ್‌ಗಳಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ಸಮಂತಾ ಚಿತ್ರಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ನಾಗ ಚೈತನ್ಯ ಹಾಗೂ ಅವರ ಮಾವ ನಾಗಾರ್ಜುನಗೆ ಇಷ್ಟವಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ನಾಗಾರ್ಜುನರ ಪತ್ನಿ ಅಮಲಾ ಅಕ್ಕಿನೇನಿರಂತೆ ಮದುವೆಯಾದ ಬಳಿಕ ಸಮಂತಾ ಸಹ ಇರಬೇಕೆನ್ನುವುದು ಅಪ್ಪ-ಮಗನ ಇಚ್ಛೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se