ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಭಾಷಾ ಜಗಳಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಡಿಎಂಕೆ ಸರ್ಕಾರ ಬಜೆಟ್ ನಲ್ಲಿ ರೂಪಾಯಿ ಚಿಹ್ನೆಯನ್ನ ತಮಿಳು ಅಕ್ಷರಕ್ಕೆ ಬದಲಾಯಿಸಿದೆ. ಈ ಚಿಹ್ನೆಯನ್ನ ಡಿಸೈನ್ ಮಾಡಿದ್ದು ಐಐಟಿ ಪ್ರೊಫೆಸರ್ ಮತ್ತು ಡಿಎಂಕೆ ಎಂಎಲ್ಎ ಮಗ ಅನ್ನೋದು ವಿಶೇಷ. ಇದರಿಂದ ಬಿಜೆಪಿ ನಾಯಕರಿಗೆ ಡಿಎಂಕೆ ಮತ್ತು ಸ್ಟಾಲಿನ್ ವಿರುದ್ಧ ಮಾತಾಡೋಕೆ ಅವಕಾಶ ಸಿಕ್ಕಿದೆ.
2010 ರಲ್ಲಿ ಐಐಟಿ ಮುಂಬೈನಿಂದ ಪೋಸ್ಟ್ ಗ್ರಾಜುಯೇಷನ್ ಮುಗಿಸಿದ ಉದಯ ಕುಮಾರ್ ಅನ್ನೋರು ಐಐಟಿ ಗುವಾಹಟಿಯಲ್ಲಿ ಕೆಲಸಕ್ಕೆ ಸೇರಿದರು. ಅವಾಗ ರೂಪಾಯಿ ಚಿಹ್ನೆಯನ್ನ ಡಿಸೈನ್ ಮಾಡೋಕೆ ಕಾಂಪಿಟೇಷನ್ ಇಟ್ಟಿದ್ರು. ಉದಯ ಕುಮಾರ್ ಅದನ್ನ ಗೆದ್ದರು.
2010 ಜುಲೈ 15 ರಂದು ಮನಮೋಹನ್ ಸಿಂಗ್ ಸರ್ಕಾರ ಈ ಚಿಹ್ನೆಯನ್ನ ಕರೆನ್ಸಿಯಲ್ಲಿ ಪರಿಚಯಿಸಿತು. ತಿರುವಣ್ಣಾಮಲೈ ಬಳಿ ಹುಟ್ಟಿದ ಉದಯ ಕುಮಾರ್, ದೇವನಾಗರಿ ‘ರಾ’ ಮತ್ತು ರೋಮನ್ ‘ಆರ್’ ಅನ್ನೋ ಅಕ್ಷರಗಳನ್ನ ಮಿಕ್ಸ್ ಮಾಡಿ ಈ ಚಿಹ್ನೆಯನ್ನ ಡಿಸೈನ್ ಮಾಡಿದ್ರು ಅಂತಾ ಹೇಳಿದ್ದಾರೆ.
ಉದಯ ಕುಮಾರ್ ಅವರು ಐಐಟಿ ಗುವಾಹಟಿಯಲ್ಲಿ ಕೆಲಸ ಮಾಡ್ತಿದ್ದಾರೆ. ಐಐಟಿ ಹೈದರಾಬಾದ್ ಮತ್ತು ಎನ್ಟಿಎ ಸಂಸ್ಥೆಗಳಿಗೂ ಲೋಗೋ ಡಿಸೈನ್ ಮಾಡಿದ್ದಾರೆ. ಅವರ ತಂದೆ ಎನ್ ಧರ್ಮಲಿಂಗಂ ತಮಿಳುನಾಡಿನ ಮಾಜಿ ಡಿಎಂಕೆ ಎಂಎಲ್ಎ.
ಬಿಜೆಪಿ ನಾಯಕರು ಈ ವಿಚಾರವನ್ನ ಸ್ಟಾಲಿನ್ ವಿರುದ್ಧ ಬಳಸಿಕೊಂಡಿದ್ದಾರೆ. ಬಿಜೆಪಿ ನಾಯಕ ಅಣ್ಣಾಮಲೈ ಈ ಕ್ರಮವನ್ನ “ಮೂರ್ಖತನ” ಅಂತಾ ಹೇಳಿದ್ದಾರೆ.
“ತಮಿಳಿನವರಿಂದ ಡಿಸೈನ್ ಮಾಡಿರೋ ರೂಪಾಯಿ ಚಿಹ್ನೆಯನ್ನ ಡಿಎಂಕೆ ಸರ್ಕಾರ ಬಜೆಟ್ ನಲ್ಲಿ ಬದಲಾಯಿಸಿದೆ. ಸ್ಟಾಲಿನ್, ನೀವು ಎಷ್ಟು ಮೂರ್ಖರಾಗಬಹುದು?” ಅಂತಾ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಬಜೆಟ್ ನಲ್ಲಿ ತಮಿಳು ಅಕ್ಷರ ಬಳಸೋದನ್ನ “ಹಾಸ್ಯಾಸ್ಪದ” ಅಂತಾ ಕರೆದಿದ್ದಾರೆ.
“ಉದಯ ಕುಮಾರ್ ಧರ್ಮಲಿಂಗಂ ಅವರು ಡಿಎಂಕೆ ಎಂಎಲ್ಎ ಮಗ, ಅವರೇ ರೂಪಾಯಿ ಚಿಹ್ನೆ ಡಿಸೈನ್ ಮಾಡಿದ್ದು. ಸ್ಟಾಲಿನ್ ಬಜೆಟ್ ನಲ್ಲಿ ರೂಪಾಯಿ ಚಿಹ್ನೆ ತೆಗೆದು ತಮಿಳು ಅಕ್ಷರ ಹಾಕೋದ್ರಿಂದ ತಮಿಳಿಯನ್ನರಿಗೆ ಅವಮಾನ ಮಾಡ್ತಿದ್ದಾರೆ” ಅಂತಾ ಮಾಳವಿಯಾ ಹೇಳಿದ್ದಾರೆ.
2020 ರಲ್ಲಿ ಹೊಸ ಶಿಕ್ಷಣ ನೀತಿ ಬಂದಾಗ ಕೇಂದ್ರ ಮತ್ತು ತಮಿಳುನಾಡು ನಡುವೆ ಭಾಷಾ ಜಗಳ ಶುರುವಾಯಿತು. ಕೇಂದ್ರ ಸರ್ಕಾರ ಹಿಂದಿ ಹೇರಲು ಪ್ರಯತ್ನ ಮಾಡ್ತಿದೆ ಅಂತಾ ಸ್ಟಾಲಿನ್ ಆರೋಪ ಮಾಡಿದ್ರು.