ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ದೋಣಿ ನಡೆಸುವ ಪಿಂಟು ಮಹ್ರಾ ಎಂಬ ವ್ಯಕ್ತಿ 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಸಂಪಾದಿಸಿ ಸುದ್ದಿಯಾಗಿದ್ದಾರೆ. 130 ದೋಣಿಗಳನ್ನು ಹೊಂದಿದ್ದ ಇವರು, ಪ್ರತಿ ದೋಣಿಯಿಂದ ದಿನಕ್ಕೆ 50,000 ರೂಪಾಯಿಗಳಿಗೂ ಹೆಚ್ಚು ಆದಾಯ ಗಳಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಆದರೆ, ಈ ಅನಿರೀಕ್ಷಿತ ಅದೃಷ್ಟದ ಬೆನ್ನಲ್ಲೇ ಪಿಂಟು ಮಹ್ರಾ ಅವರಿಗೆ ತೆರಿಗೆ ಸಂಕಷ್ಟ ಎದುರಾಗಿದೆ. ಆದಾಯ ತೆರಿಗೆ ಇಲಾಖೆಯು ಅವರಿಗೆ 12.8 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹಣಕಾಸು ತಜ್ಞ ಎ.ಕೆ. ಮಂಧನ್ ಈ ಬಗ್ಗೆ ಪ್ರತಿಕ್ರಿಯಿಸಿ, “ದಿನಕ್ಕೆ 500 ರೂಪಾಯಿ ಸಂಪಾದಿಸುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ 30 ಕೋಟಿ ರೂಪಾಯಿ ಗಳಿಸಿದ್ದು ಅಚ್ಚರಿಯ ವಿಷಯ. ಆದರೆ, 12.8 ಕೋಟಿ ರೂಪಾಯಿ ತೆರಿಗೆ ಪಾವತಿಸುವುದು ಆತನಿಗೆ ಆಘಾತವನ್ನುಂಟು ಮಾಡಿದೆ” ಎಂದಿದ್ದಾರೆ. ಇಂತಹ ಅನಿರೀಕ್ಷಿತ ಹೆಚ್ಚಿನ ಆದಾಯ ಗಳಿಸುವವರಿಗೆ ಪ್ರತ್ಯೇಕ ತೆರಿಗೆ ರಚನೆ ಇರಬೇಕೇ ? ಅಥವಾ ಎಲ್ಲರಿಗೂ ಒಂದೇ ರೀತಿಯ ತೆರಿಗೆ ನಿಯಮ ಅನ್ವಯಿಸಬೇಕೇ ಎಂಬ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ.
ಪಿಂಟು ಮಹ್ರಾ ಅವರಿಗೆ ಹಣಕಾಸಿನ ಅರಿವು ಇಲ್ಲದ ಕಾರಣ, ತೆರಿಗೆ ವಿನಾಯಿತಿ, ಮರುಹೂಡಿಕೆ ಮತ್ತು ಆಸ್ತಿ ರಕ್ಷಣೆಯ ಬಗ್ಗೆ ತಿಳಿದಿರಲಿಲ್ಲ. ಯಾರಾದರೂ ಮಾರ್ಗದರ್ಶನ ನೀಡಿದ್ದರೆ, ಅವರು ಲಕ್ಷಾಂತರ ರೂಪಾಯಿ ಉಳಿಸಬಹುದಿತ್ತು ಎಂದು ಮಂಧನ್ ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 4 ಮತ್ತು 68ರ ಅಡಿಯಲ್ಲಿ ಈ ತೆರಿಗೆ ನೋಟಿಸ್ ನೀಡಲಾಗಿದೆ.
ಮಾಜಿ ಇನ್ಫೋಸಿಸ್ ಸಿಎಫ್ಒ ಮೋಹನ್ದಾಸ್ ಪೈ, “ಪಿಂಟು ಮಹ್ರಾ ಅವರು ಇತರ ಉದ್ಯಮಿಗಳಂತೆ ತೆರಿಗೆ ಪಾವತಿಸಬೇಕು” ಎಂದು ಹೇಳಿದ್ದಾರೆ. ಭಾರತದಲ್ಲಿ ಅಸಂಘಟಿತ ವಲಯದ ತೆರಿಗೆ ವಿಧಿಸುವಿಕೆ ಸವಾಲಿನ ವಿಷಯವಾಗಿದೆ.
₹30 CRORE EARNING – ₹12.8 CRORE TAX!
A boatman from Prayagraj, who spent his entire life rowing boats and earning barely ₹500 a day, suddenly found himself making a massive ₹30 crore during the Mahakumbh Mela.
The huge crowd of pilgrims created an unexpected demand, and the…
— A K Mandhan (@A_K_Mandhan) March 12, 2025
I hope he will pay @IncomeTaxIndia now that CM himself has spoken about him. Good! https://t.co/3UkHnb6m8i
— Mohandas Pai (@TVMohandasPai) March 5, 2025