![](https://kannadadunia.com/wp-content/uploads/2024/06/ajit-pawar-fadnavis.png)
ನವದೆಹಲಿ: ಮೋದಿ 3.0 ಸರ್ಕಾರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್.ಸಿ.ಪಿ.ಗೆ ಕ್ಯಾಬಿನೆಟ್ ಮಂತ್ರಿ ಸ್ಥಾನ ಮಿಸ್ ಆಗಿದೆ.
ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಒಳಗೊಂಡ ಕ್ಯಾಬಿನೆಟ್ ವಿವಾದದ ಕುರಿತು ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್, ಎನ್ಸಿಪಿ ಕೆಲವು ದಿನಗಳ ಕಾಲ ಕಾಯಲು ಸಿದ್ಧವಾಗಿದೆ. ಆದರೆ ನಮಗೆ ನೀಡಲಾದ ಎಂಒಎಸ್(ರಾಜ್ಯ ಸಚಿವ) ಸ್ಥಾನಕ್ಕಿಂತ ಕ್ಯಾಬಿನೆಟ್ ಹುದ್ದೆಯನ್ನು ಬಯಸಿದೆ ಎಂದು ಹೇಳಿದ್ದಾರೆ.
ನಾವು ಇಂದು ಒಬ್ಬ ಲೋಕಸಭೆ ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು ಹೊಂದಿದ್ದೇವೆ, ಆದರೆ ಮುಂದಿನ 2-3 ತಿಂಗಳಲ್ಲಿ ನಾವು ರಾಜ್ಯಸಭೆಯಲ್ಲಿ ಒಟ್ಟು 3 ಸದಸ್ಯರನ್ನು ಹೊಂದಲಿದ್ದೇವೆ. ಸಂಸತ್ತಿನಲ್ಲಿ ನಮ್ಮ ಸಂಸದರ ಸಂಖ್ಯೆ 4 ಆಗಿರುತ್ತದೆ. ಹಾಗಾಗಿ ನಾವು ಸಂಪುಟದಲ್ಲಿ ಇರಬೇಕು ಎಂದು ಹೇಳಿದ್ದೇವೆ ಎಂದು ಅಜಿತ್ ಪವಾರ್ ವಿವರಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್ಸಿಪಿ(ಅಜಿತ್ ಪವಾರ್) ಅವರಿಗೆ ರಾಜ್ಯ ಸಚಿವ ಸ್ಥಾನವನ್ನು ನೀಡಲಾಯಿತು. ಆದರೆ, ಪಕ್ಷವು ಕ್ಯಾಬಿನೆಟ್ ಸ್ಥಾನ ಪಡೆಯಲು ಒತ್ತಾಯಿಸಿದೆ ಎಂದು ಹೇಳಿದರು.
ರಾಜ್ಯ ಸಚಿವ ಸ್ಥಾನ ಸ್ವೀಕರಿಸುವ ಬದಲು ಕ್ಯಾಬಿನೆಟ್ ವಿಸ್ತರಣೆಯ ಸಮಯದಲ್ಲಿ ಕ್ಯಾಬಿನೆಟ್ ಸ್ಥಾನ ಪಡೆಯಲು ಎನ್ಸಿಪಿ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಸೇರಿದಂತೆ ಎನ್ಸಿಪಿ ಸಂಸದರಲ್ಲಿ ಯಾರಿಗೂ ಸಚಿವ ಸ್ಥಾನ ಸಿಗುವುದಿಲ್ಲ ಎಂಬುದರ ಬಗ್ಗೆ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ MoS ಸ್ವತಂತ್ರ ಉಸ್ತುವಾರಿ ನೀಡಲಾಗಿತ್ತು. ಪ್ರಫುಲ್ ಪಟೇಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಆದರೆ, ಅವರು ಈಗಾಗಲೇ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರಿಂದ MoS ಸ್ವತಂತ್ರ ಹುದ್ದೆಯನ್ನು ಹೊಂದಲು ಬಯಸಲಿಲ್ಲ. ಮೈತ್ರಿ ಸರ್ಕಾರ ರಚನೆಯಾದಾಗ ಕೆಲವು ಮಾನದಂಡಗಳನ್ನು ಅನುಸರಿಸಬೇಕು. ಭವಿಷ್ಯದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂಬ ನನಗೆ ಖಾತ್ರಿಯಿದೆ. ಆ ಸಮಯದಲ್ಲಿ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಕಲ್ಪಿಸಲಾಗುವುದು ಎಂದು ಫಡ್ನವೀಸ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ರಕ್ಷಾ ಖಡ್ಸೆ, ಮುರಳೀಧರ್ ಮೊಹೋಲ್, ರಾಮದಾಸ್ ಅಠವಾಲೆ ಮತ್ತು ಪ್ರತಾಪ್ ರಾವ್ ಜಾಧವ್ ಸೇರಿ ಮಹಾರಾಷ್ಟ್ರದ ಆರು ಸಂಸದರು ಸೇರ್ಪಡೆಯಾಗಲಿದ್ದಾರೆ.