alex Certify ಕೆಎಎಸ್ ಅಧಿಕಾರಿಗೆ ಜಿಪಂ ಸಿಇಒ ಹುದ್ದೆ; ನೇಮಕಾತಿ ರದ್ದುಗೊಳಿಸಿದ ಕೆಎಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಎಎಸ್ ಅಧಿಕಾರಿಗೆ ಜಿಪಂ ಸಿಇಒ ಹುದ್ದೆ; ನೇಮಕಾತಿ ರದ್ದುಗೊಳಿಸಿದ ಕೆಎಟಿ

ಕಲಬುರಗಿ: ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ನೂರ್ ಜಹಾರ್ ನೇಮಕವನ್ನು ರದ್ದು ಮಾಡಲಾಗಿದೆ. ಕಲಬುರ್ಗಿಯ ಕೆಎಟಿ ಪೀಠದಿಂದ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ಜಿಪಂ ಸಿಇಒ ಆಗಿ ನೂರ್ ಜಹಾರ್ ನೇಮಕ ಕಾನೂನು ಬಾಹಿರ ಎಂದು ಹೇಳಲಾಗಿದೆ. ನೂರ್ ಜಹಾರ್ ಕೆಎಎಸ್ ಅಧಿಕಾರಿಯಾಗಿದ್ದಾರೆ. ಆದರೂ, ಅವರನ್ನು ಜಿಪಂ ಸಿಇಒ ಆಗಿ ನೇಮಕ ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ರಾಯಚೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಕೆಎಟಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೆಎಟಿ ಪೀಠ ನೂರ್ ಜಹಾರ್ ನೇಮಕ ಕಾನೂನುಬಾಹಿರವೆಂದು ರದ್ದು ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...