alex Certify ಪಡಿತರ ಚೀಟಿದಾರರಿಗೆ ಭರ್ಜರಿ ದೀಪಾವಳಿ ಉಡುಗೊರೆ, ಸರ್ಕಾರದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಭರ್ಜರಿ ದೀಪಾವಳಿ ಉಡುಗೊರೆ, ಸರ್ಕಾರದ ಘೋಷಣೆ

ಪಡಿತರ ಚೀಟಿದಾರರಿಗೊಂದು ಸಂತಸದ ಸುದ್ದಿ ಇಲ್ಲಿದೆ. ನೀವು ಸಹ ಪಡಿತರ ಕಾರ್ಡ್ ಹೊಂದಿರುವವರಾಗಿದ್ದರೆ ದೀಪಾವಳಿ ಉಡುಗೊರೆ ಸಿಗಲಿದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದೆ. ಇದಾದ ಬಳಿಕ ರಾಜ್ಯ ಸರ್ಕಾರಗಳು ಕೂಡ ಕಾರ್ಡ್‌ದಾರರಿಗೆ ಅನೇಕ ಕೊಡುಗೆ ಘೋಷಣೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಕ್ಕರೆ ಬೆಲೆ ಇಳಿಕೆಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲ 100 ರೂಪಾಯಿಗೆ ದಿನಸಿ ಕಿಟ್ ಕೂಡ ನೀಡಲಾಗುತ್ತದೆ.

ಹೆಚ್ಚುತ್ತಿರುವ ಹಣದುಬ್ಬರ ಗಮನದಲ್ಲಿಟ್ಟುಕೊಂಡು ಸರ್ಕಾರ ಸಕ್ಕರೆ ಬೆಲೆಯನ್ನು ಕಡಿಮೆ ಮಾಡಲು ಘೋಷಿಸಿದೆ. ಇದಾದ ನಂತರ ಸಕ್ಕರೆಗೆ ಕೆಜಿಗೆ ಕೇವಲ 20 ರೂ. ಸರ್ಕಾರದ ಈ ಘೋಷಣೆಯ ಲಾಭ ಅಂತ್ಯೋದಯ ಕಾರ್ಡ್ ದಾರರಿಗೆ ಸಿಗಲಿದೆ. ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಸೌಲಭ್ಯದಿಂದ ಜನರು ಸಂತಸಗೊಂಡಿದ್ದು, ಈ ಘೋಷಣೆಯಿಂದ ಅನುಕೂಲವಾಗಲಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಸರ್ಕಾರ ಕೊಡುಗೆ

ಕೇಂದ್ರ ಸರ್ಕಾರದ ಘೋಷಣೆಗಳ ಜತೆಗೆ ರಾಜ್ಯ ಸರ್ಕಾರಗಳೂ ದೀಪಾವಳಿ ಉಡುಗೊರೆ ನೀಡುತ್ತಿವೆ. ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಪಡಿತರ ಚೀಟಿದಾರರಿಗೆ ವಿಶೇಷ ಘೋಷಣೆ ಮಾಡಿದೆ. ಇದರ ಅಡಿಯಲ್ಲಿ ಸರ್ಕಾರದಿಂದ ಕೇವಲ 100 ರೂ.ಗೆ ದಿನಸಿ ನೀಡುತ್ತಿದೆ. ಇದರಲ್ಲಿ ಒಂದು ಕೆ.ಜಿ ರವೆ, ಖಾದ್ಯ ಎಣ್ಣೆ, ತೊಗರಿ, ಉದ್ದಿನಬೇಳೆ ಮತ್ತು ಶೇಂಗಾ ಸಿಗುತ್ತದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿರುವುದರಿಂದ ದೇಶಾದ್ಯಂತ ಕಾರ್ಡುದಾರರಲ್ಲಿ ಸಂತಸದ ಅಲೆ ಎದ್ದಿದ್ದರೆ, ಮಹಾರಾಷ್ಟ್ರ ಸರ್ಕಾರದ ಈ ಘೋಷಣೆ ರಾಜ್ಯದ ಪಡಿತರ ಚೀಟಿದಾರರ ದೀಪಾವಳಿ ಸಂಭ್ರಮ ಹೆಚ್ಚಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se