alex Certify ರಥೋತ್ಸವ ವೇಳೆ ಅವಘಡ: ಬೆಳ್ಳಿ ಮೂರ್ತಿ ಬಿದ್ದು ಬಾಲಕ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಥೋತ್ಸವ ವೇಳೆ ಅವಘಡ: ಬೆಳ್ಳಿ ಮೂರ್ತಿ ಬಿದ್ದು ಬಾಲಕ ದುರ್ಮರಣ

ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ರಥೋತ್ಸವದ ವೇಳೆ ರಥದ ಮೇಲಿಂದ ಬೆಳ್ಳಿ ಮೂರ್ತಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ.

ಸೋಮವಾರ ನಡೆದ ಸಂಗಮೇಶ್ವರ ರಥೋತ್ಸವದ ವೇಳೆ ಘಟನೆ ನಡೆದಿದೆ. ಶಿವಾನಂದ ಸಾವಳಗಿ(12) ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲಿದ್ದ 5 ಕೆಜಿ ತೂಕದ ಬೆಳ್ಳಿ ನವಿಲು ರಥ ಎಳೆಯುವಾಗ ಬಾಲಕನ ಮೇಲೆ ಬಿದ್ದು ಮೃತಪಟ್ಟಿದ್ದಾನೆ.

ರಥ ಸಾಗಬೇಕಾದ ದಾರಿಯಲ್ಲಿ ತಗ್ಗು ದಿನ್ನೆ ಇದ್ದು, ತಗ್ಗಿನಲ್ಲಿ ರಥದ ಚಕ್ರಗಳು ಸಿಲುಕಿದಾಗ ಭಕ್ತರು ಜೋರಾಗಿ ರಥದ ಎಳೆದಿದ್ದಾರೆ. ಈ ವೇಳೆ ಕಳಸದ ಮೇಲಿದ್ದ ಬೆಳ್ಳಿ ನವಿಲು ಮೂರ್ತಿ ಬಾಲಕನ ಮೇಲೆ ಬಿದ್ದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...