alex Certify ಆಟವಾಡುಗಾಲೇ ನಡೆದಿದೆ ಆಘಾತಕಾರಿ ಘಟನೆ: ಮಿಸ್ ಫೈರ್ ಆಗಿ ಬಾಲಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟವಾಡುಗಾಲೇ ನಡೆದಿದೆ ಆಘಾತಕಾರಿ ಘಟನೆ: ಮಿಸ್ ಫೈರ್ ಆಗಿ ಬಾಲಕ ಸಾವು

ರಾಮನಗರ: ನಾಡ ಬಂದೂಕಿನಿಂದ ಮಿಸ್ ಫೈರ್ ಆಗಿ ಬಾಲಕ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಾಡಶಿವನಹಳ್ಳಿಯಲ್ಲಿ 7 ವರ್ಷದ ಶಮಾ ಮೃತಪಟ್ಟಿದ್ದಾನೆ. ಬಾಲಕನ ಸಹೋದರ ಸಾಜಿದ್(16) ಮಿಸ್ ಫೈರ್ ಮಾಡಿದ್ದಾನೆ. ತೋಟದ ಮನೆಯಲ್ಲಿದ್ದ ಬಂದೂಕು ಹಿಡಿದುಕೊಂಡು ಸಾಜಿದ್ ಮತ್ತು ಶಮಾ ಆಟವಾಡುತ್ತಿದ್ದರು. ಈ ವೇಳೆ ಮಿಸ್ ಆಗಿ ಸಾಜಿದ್ ಟ್ರಿಗರ್ ಒತ್ತಿದ್ದಾನೆ. ಟ್ರಿಗರ್ ಒತ್ತುತ್ತಿದ್ದಂತೆ ಶಮಾಗೆ ಗುಂಡು ತಗುಲಿದೆ.

ಗುಂಡು ತಗುಲಿದ ಪರಿಣಾಮ ಶಮಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಕುಟುಂಬದವರು ಮಲ್ಲೇಶ್ ಎಂಬುವರ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಮೀನ್ ಉಲ್ಲಾ ಮತ್ತು ಸಮ್ ಸೋನ್ ಕುಟುಂಬದವರು ಕೆಲಸ ಮಾಡಿಕೊಂಡಿದ್ದು, ಅವರ ಮಕ್ಕಳು ಆಟವಾಡುವಾಗ ಘಟನೆ ನಡೆದಿದೆ.

ಸುರಕ್ಷತಾ ನಿಯಮ ಪಾಲಿಸದ ಕಾರಣ ತೋಟದ ಮಾಲೀಕ ಮಲ್ಲೇಶನನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡು ಹಾರಿಸಿದ ಬಾಲಕ ಸಾಜಿದ್ ನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...