
ರಾಷ್ಟ್ರೀಯ ಭದ್ರತೆಯ ಸಂಬಂಧ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ ಎಂಬ ಕಾರಣವನ್ನು ಸ್ವಾಮಿಗೆ ಸೆಕ್ರೇಟರಿಯೇಟ್ ನೀಡಿದೆ. ಕಳೆದ ವರ್ಷದ ಜೂನ್ನಲ್ಲಿ ಲಡಾಖ್ ಪ್ರದೇಶದಲ್ಲಿ ಭಾರತ ಹಾಗೂ ಚೀನಿ ತುಕಡಿಗಳ ನಡುವೆ ಘರ್ಷಣೆ ನಡೆದ ಬಳಿಕ ಈ ವಿಚಾರವನ್ನು ವಿಪಕ್ಷಗಳು ಮೇಲ್ಮನೆಯಲ್ಲಿ ಉಲ್ಲೇಖಿಸುತ್ತಾ ಬಂದಿವೆ.
ಭಾರತದ ಪ್ರದೇಶವನ್ನು ಯಾರೊಬ್ಬರೂ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಕರೆದಿದ್ದ ಸರ್ವಪಕ್ಷಗಳ ನಿಯೋಗಕ್ಕೆ ತಿಳಿಸಿದ್ದರು.
“ರಾಷ್ಟ್ರೀಯ ಹಿತಾಸಕ್ತಿ ಎಂದುಕೊಂಡು ಚೀನೀಯರು ವಾಸ್ತವ ನಿಯಂತ್ರಣ ರೇಖೆ ದಾಟಿದರೋ ಇಲ್ಲವೋ ಎಂಬ ನನ್ನ ಪ್ರಶ್ನೆಯನ್ನು ಕೇಳಲು ಅನುಮತಿ ನೀಡದೆ ಇರುವುದು ರಾಜ್ಯಸಭಾ ಸೆಕ್ರೇಟರಿಯೇಟ್ಗೆ ದುರಂತವಲ್ಲದೇ ಇದ್ದರೂ ಹಾಸ್ಯಾಸ್ಪದವಾಗಿದೆ!!!” ಎಂದು ಸ್ವಾಮಿ ಟ್ವೀಟ್ ಮೂಲಕ ಈ ವಿಷಯ ಹೇಳಿಕೊಂಡಿದ್ದಾರೆ.
ಸೂಕ್ಷ್ಮ ವಿಷಯಗಳು ಒಳಗೊಂಡ ವಿಚಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ನೀಡುವ ಸೂಚನೆಗಳ ಅನ್ವಯ ರಾಜ್ಯ ಸಭಾ ಸೆಕ್ರೇಟರಿಯೇಟ್ ಕೆಲಸ ಮಾಡುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.