alex Certify ನವಜೋತ್​ ಸಿಂಗ್​ ಸಿಧುರನ್ನು ರಾಖಿ ಸಾವಂತ್​ಗೆ ಹೋಲಿಸಿದ ಆಪ್​ ನಾಯಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಜೋತ್​ ಸಿಂಗ್​ ಸಿಧುರನ್ನು ರಾಖಿ ಸಾವಂತ್​ಗೆ ಹೋಲಿಸಿದ ಆಪ್​ ನಾಯಕ..!

ಪಂಜಾಬ್​ ಆಪ್​​​ನ ಸಹ ಉಸ್ತುವಾರಿ ಹಾಗೂ ದೆಹಲಿ ಶಾಸಕ ರಾಘವ್​ ಚಡ್ಡಾ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧುರನ್ನು ‘ಪಂಜಾಬ್​ ರಾಜಕೀಯದ ರಾಖಿ ಸಾವಂತ್’​ ಎಂದು ಲೇವಡಿ ಮಾಡಿದ್ದಾರೆ .

ಕೇಂದ್ರ ಸರ್ಕಾರವು ವಿವಾದಾತ್ಮಕ ಕೃಷಿ ಮಸೂದೆ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ ವಿರುದ್ಧ ಟ್ವಿಟರ್​ನಲ್ಲಿ ನವಜೋತ್​ ಸಿಂಗ್​ ಸಿಧು ಆಕ್ರೋಶ ವ್ಯಕ್ತಪಡಿಸಿದ ಸಂಬಂಧ ರಾಘವ್​ ಚಡ್ಡಾ ಈ ಹೇಳಿಕೆಯನ್ನು ನೀಡಿದ್ದಾರೆ.

ಅರವಿಂದ್ ಕೇಜ್ರಿವಾಲ್​ ಅವರೇ ನೀವು ಖಾಸಗಿ ಮಂಡಿಯ ಕೇಂದ್ರದ ಕಪ್ಪು ಕಾನೂನಿಗೆ ಸೂಚನೆ ನೀಡಿದ್ದೀರಾ…? ಇದನ್ನು ಡಿ ನೋಟಿಫೈ ಮಾಡಲು ಸಾಧ್ಯವೇ ಅಥವಾ ನಿಮ್ಮ ಛದ್ಮವೇಷ ಇನ್ನೂ ಮುಂದುವರಿದಿದೆಯೇ..? ಎಂದು ಸಿಧು ಟ್ವಿಟರ್​ನಲ್ಲಿ ಪ್ರಶ್ನೆ ಮಾಡಿದ್ದರು.

ಪಂಜಾಬ್​ ರಾಜಕೀಯದ ರಾಖಿ ಸಾವಂತ್​ ನವಜೋತ್​ ಸಿಂಗ್​ ಸಿಧು, ಕ್ಯಾಪ್ಟನ್​ ವಿರುದ್ಧ ನಿರಂತರ ವಾಗ್ದಾಳಿ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್​ ಹೈಕಮಾಂಡ್​ನಿಂದ ಬೈಸಿಕೊಂಡಿದ್ದರು. ಹೀಗಾಗಿ ಅವರು ಇದೀಗ ಅರವಿಂದ ಕೇಜ್ರಿವಾಲ್​ರ ಹಿಂದೆ ಬಿದ್ದಿದ್ದಾರೆ. ನಾಳೆಯವರೆಗೆ ಕಾಯಿರಿ. ಕ್ಯಾಪ್ಟನ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.

— Navjot Singh Sidhu (@sherryontopp) September 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...