alex Certify ಕೃಷಿ ಮಸೂದೆ, ಬಿಎಸ್​ಎಫ್​ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿರೋಧಿಸಿ ವಿಶೇಷ ಅಧಿವೇಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಮಸೂದೆ, ಬಿಎಸ್​ಎಫ್​ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿರೋಧಿಸಿ ವಿಶೇಷ ಅಧಿವೇಶನ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಮಸೂದೆ ಸಂಬಂಧ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಪಂಜಾಬ್​ ಸಿಎಂ ಚರಂಜಿತ್​​ ಸಿಂಗ್​ ಚನ್ನಿ ಕೇಂದ್ರಕ್ಕೆ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. ಕೃಷಿ ಮಸೂದೆಯನ್ನು ನೀವು ರದ್ದು ಪಡಿಸದೇ ಹೋದಲ್ಲಿ ರಾಜ್ಯದಲ್ಲಿ ನಾವೇ ಅದನ್ನು ರದ್ದು ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಜಾಬ್​ ಸಿಎಂ ಚರಂಜಿತ್​ ಸಿಂಗ್​ ಚನ್ನಿ, ನವೆಂಬರ್​ 8ರಂದು ಕೇಂದ್ರ ಸರ್ಕಾರವು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ನಿರ್ಧರಿಸಿದೆ. ನವೆಂಬರ್​ 8ರ ಒಳಗಾಗಿ ಕೇಂದ್ರ ಸರ್ಕಾರವೇ ಕೃಷಿ ಮಸೂದೆಯನ್ನು ಹಿಂತೆಗೆದುಕೊಂಡರೆ ಉತ್ತಮ. ಇಲ್ಲವಾದಲ್ಲಿ ನವೆಂಬರ್​ 8ರ ವಿಶೇಷ ಅಧಿವೇಶನದಲ್ಲಿ ನಾವೇ ಆ ಮಸೂದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಇಲ್ಲಿದೆ ನಿಂಬೆಯ ಹಲವು ‘ಔಷಧೀಯ’ ಪ್ರಯೋಜನಗಳು

ಇನ್ನು ಬಿಎಸ್​ಎಫ್​ಗೆ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಚರಂಜಿತ್​​ ಸಿಂಗ್​ ಚನ್ನಿ ವಿರೋಧಿಸಿದ್ದಾರೆ. ಬಿಎಸ್​ಎಫ್​ ವ್ಯಾಪ್ತಿಯನ್ನು 15 ಕಿಲೋಮೀಟರ್​ನಿಂದ 50 ಕಿಲೋಮೀಟರ್​ಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಅಧಿಸೂಚನೆಯನ್ನೂ ನವೆಂಬರ್​​ 8ರೊಳಗಾಗಿ ರದ್ದುಗೊಳಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಸರ್ವಾಧಿಕಾರದ ಪರಮಾವಧಿಯಾಗಿದೆ.

ಮೋದಿ ಸರ್ಕಾರದ ಇಂತಹ ನಿರ್ಧಾರಗಳು ಪಂಜಾಬ್​ ಸರ್ಕಾರ ಹಾಗೂ ಕೇಂದ್ರದ ನಡುವಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

— ANI (@ANI) October 27, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...