alex Certify ಮಾನವೀಯ ಕಾರ್ಯ: ಬಡ ಬಾಲಕನ ಶಸ್ತ್ರಚಿಕಿತ್ಸೆಗೆ ಫೇಸ್ಬುಕ್ ಮೂಲಕ 14 ಲಕ್ಷ ರೂ. ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯ ಕಾರ್ಯ: ಬಡ ಬಾಲಕನ ಶಸ್ತ್ರಚಿಕಿತ್ಸೆಗೆ ಫೇಸ್ಬುಕ್ ಮೂಲಕ 14 ಲಕ್ಷ ರೂ. ಸಂಗ್ರಹ

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಬ್ಬಿಣದ ರಾಡೊಂದು ತಲೆಗೆ ಹೊಕ್ಕ ಕಾರಣ ಪುಣೆಯ 12 ವರ್ಷ ವಯಸ್ಸಿನ ಬಾಲಕ ಚೇತನ್ ಮಹೇಶ್ ಗಢಾವೆಯನ್ನು ನಗರದ ನೋಬೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಚಿಕಿತ್ಸಾ ವೆಚ್ಚವನ್ನು ಭರಿಸಲು ಆತನ ಕುಟುಂಬ ಅಶಕ್ತವಾಗಿತ್ತು.

ಈ ವೇಳೆ ಕುಟುಂಬದ ನೆರವಿಗೆ ಬಂದ ಎಂಎನ್‌ಎಸ್‌ ಕಾರ್ಪೋರೇಟರ್‌ ವಸಂತ್‌ ಮೋರೆ, ಖುದ್ದು ಆಸ್ಪತ್ರೆಗೆ ತೆರಳಿ ಮಗುವಿನ ಪರಿಸ್ಥಿತಿಯನ್ನು ವಿಚಾರಿಸಿ ತಿಳಿದುಕೊಂಡಿದ್ದಾರೆ.

ಬಳಿಕ ಫೇಸ್ಬುಕ್‌ನಲ್ಲಿರುವ ತಮ್ಮ ವಾಲ್‌ನಲ್ಲಿ ವಿನಂತಿಯೊಂದನ್ನು ಪೋಸ್ಟ್ ಮಾಡಿದ ಮೋರೆ, ಚೇತನ್‌ನ ನೆರವಿಗೆ ಬರಲು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಚೇತನ್‌ರ ತಂದೆಯ ಖಾತೆಗೆ ತಮ್ಮ ಕೈಲಾದ ಮೊತ್ತವನ್ನು ಹಾಕಲು ಮುಂದೆ ಬಂದಿದ್ದಾರೆ. ಒಂದೇ ದಿನದಲ್ಲಿ 14 ಲಕ್ಷ ರೂ.ಗಳು ಬಾಲಕನ ಚಿಕಿತ್ಸೆಗೆ ನೆರವಾಗಲೆಂದು ಸಂಗ್ರಹವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...