ಪುಣೆ ಬಳಿಯ ದೇಹು ರಸ್ತೆಯಲ್ಲಿ ಭೀಕರ ಕೊಲೆ ನಡೆದಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 27 ವರ್ಷದ ಯುವಕನಿಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ವಿಕ್ರಮ್ ಗುರವ್ ಸ್ವಾಮಿ ರೆಡ್ಡಿ ಕೊಲೆಯಾದ ವ್ಯಕ್ತಿ.
ನಿನ್ನೆ ರಾತ್ರಿ ಅಂಬೇಡ್ಕರ್ ನಗರದಲ್ಲಿ ನಂದಕಿಶೋರ್ ಯಾದವ್ ಅವರ ಸೋದರಳಿಯn ಮಗಳ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಶಾಬೀರ್ ಶೇಖ್ ಮತ್ತು ಫೈಜಲ್ ಶೇಖ್ ಎಂಬ ಇಬ್ಬರು ಯುವಕರು ಕಾರ್ಯಕ್ರಮಕ್ಕೆ ಆಗಮಿಸಿ ಗಲಾಟೆ ಆರಂಭಿಸಿದ್ದಾರೆ. ನಂದಕಿಶೋರ್ ಯಾದವ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ.
ಈ ಗಲಾಟೆಯನ್ನು ಬಿಡಿಸಲು ಬಂದ ವಿಕ್ರಮ್ ರೆಡ್ಡಿ ಅವರನ್ನು ಶಾಬೀರ್ ಶೇಖ್ ಗುಂಡು ಹಾರಿಸಿ ಕೊಂದಿದ್ದಾನೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ನಂದಕಿಶೋರ್ ಯಾದವ್ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
वाढदिवसाच्या कार्यक्रमात किरकोळ कारणावरून वाद; देहूरोड येथे गोळीबारात एकाचा मृत्यू#pimprichinchwad #Crime #Police #Death pic.twitter.com/eSjNh9CXFp
— Lokmat (@lokmat) February 14, 2025