alex Certify BIG NEWS: ವರದಕ್ಷಿಣೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ; ಪುತ್ರಿ ಮದುವೆಗೆ ಪೋಷಕರು ನೀಡಿದ ಉಡುಗೊರೆ ವರದಕ್ಷಿಣೆಯಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರದಕ್ಷಿಣೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ; ಪುತ್ರಿ ಮದುವೆಗೆ ಪೋಷಕರು ನೀಡಿದ ಉಡುಗೊರೆ ವರದಕ್ಷಿಣೆಯಲ್ಲ

ಕೊಚ್ಚಿ: ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಅಡಿಯಲ್ಲಿ ವಧುವಿನ ಕಲ್ಯಾಣಕ್ಕಾಗಿ ಮದುವೆಯ ಸಮಯದಲ್ಲಿ ಆಕೆಯ ಪೋಷಕರು ವಧುವಿಗೆ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ವಧುವಿನ ಪೋಷಕರು ಉಡುಗೊರೆಯಾಗಿ ನೀಡಿದ್ದ ಚಿನ್ನಾಭರಣಗಳನ್ನು ವಧುವಿಗೆ ಹಿಂದಿರುಗಿಸುವಂತೆ ಕೊಲ್ಲಂ ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿ ಹೊರಡಿಸಿದ್ದ ಆದೇಶದ ವಿರುದ್ಧ ತೊಡಿಯೂರು ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಹೀಗೆ ಹೇಳಿದೆ.

ಕಾನೂನಿನ ಪ್ರಕಾರ, ವಧುವಿನ ಪೋಷಕರು ತಮ್ಮ ಇಚ್ಛೆಯ ಮೇರೆಗೆ ಉಡುಗೊರೆಯಾಗಿ ನೀಡಿದ ಚಿನ್ನಾಭರಣಗಳು ವರದಕ್ಷಿಣೆ ವ್ಯಾಪ್ತಿಗೆ ಬರುವುದಿಲ್ಲ, ಆದ್ದರಿಂದ ಅರ್ಜಿದಾರರು, ವರದಕ್ಷಿಣೆ ನಿಷೇಧ ಅಧಿಕಾರಿಗೆ ಮಧ್ಯಪ್ರವೇಶಿಸಲು ಅಥವಾ ಆದೇಶ ಹೊರಡಿಸಲು ಯಾವುದೇ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ನ್ಯಾಯಮೂರ್ತಿ ಎಂ.ಆರ್. ಅನಿತಾ ಅವರು, ಚಿನ್ನಾಭರಣಗಳು ವರದಕ್ಷಿಣೆಯಾಗಿ ಪಡೆದಿವೆಯೇ ಎಂಬುದನ್ನು ಅಧಿಕಾರಿ ಪರಿಶೀಲಿಸಿ ದೃಢಪಡಿಸಿದ್ದಾರೆಯೇ ಎಂಬುದು ಸ್ಪಷ್ಟವಾಗದ ಕಾರಣ ವರದಕ್ಷಿಣೆ ನಿಷೇಧ ಅಧಿಕಾರಿ ಆದೇಶ ಒಪ್ಪಿಲ್ಲ.

ಮದುವೆಗೆಂದು ಪಡೆದಿದ್ದ 55 ಪವನ್ ಚಿನ್ನಾಭರಣಗಳನ್ನು ವಾಪಸ್ ನೀಡಬೇಕು ಎಂದು ಮಹಿಳೆ ಒತ್ತಾಯಿಸಿದ್ದು, ಒಡವೆಗಳನ್ನು ಸಹಕಾರಿ ಬ್ಯಾಂಕ್‌ನ ಲಾಕರ್‌ ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ವಿವಾಹದ ವೇಳೆ ವಧುವಿನ ಮನೆಯವರು ನೀಡಿದ ನೆಕ್ಲೇಸ್ ಮತ್ತು ಲಾಕರ್‌ನಲ್ಲಿ ಇಟ್ಟಿದ್ದ ಆಭರಣಗಳನ್ನು ಹಿಂದಿರುಗಿಸುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Co se stane, Harvard označil dvě potraviny Kdy solit těstoviny: nejčastější chyby, které dělá Nejen skořice a šalvěj - 11 zdravých Nikdy nedělejte pilulky: Zde je důvod, proč Lékař odhaluje neobvyklé vlastnosti vejcí: Co jste o nich