alex Certify ನೀವೇನು ಚಿಕ್ಕಮಕ್ಕಳಲ್ಲ, ನಿಮ್ಮನ್ನೇ ಬದಲಾಯಿಸುತ್ತೇವೆ: ಬಿಜೆಪಿ ಸಂಸದರಿಗೆ ಮೋದಿ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೇನು ಚಿಕ್ಕಮಕ್ಕಳಲ್ಲ, ನಿಮ್ಮನ್ನೇ ಬದಲಾಯಿಸುತ್ತೇವೆ: ಬಿಜೆಪಿ ಸಂಸದರಿಗೆ ಮೋದಿ ವಾರ್ನಿಂಗ್

ನವದೆಹಲಿ: ಕಲಾಪಕ್ಕೆ ಗೈರು ಹಾಜರಾದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದ್ದು, ನೀವು ಬದಲಾವಣೆಯಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.

ನೀವೇನು ಚಿಕ್ಕಮಕ್ಕಳಲ್ಲ, ವಾಸ್ತವ ಅರ್ಥಮಾಡಿಕೊಂಡು ಬದಲಾಗಿ, ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಬದಲಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಸಂಸತ್ ಕಲಾಪಕ್ಕೆ ಗೈರು ಹಾಜರಾದ ಬಿಜೆಪಿ ಸಂಸದರಿಗೆ ವಾರ್ನಿಂಗ್ ಮಾಡಿದ ಮೋದಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಬಿಜೆಪಿ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿ ಅಸಮಾಧಾನ ಹೊರಹಾಕಿದ್ದಾರೆ.

ಸಭೆಯ ಆರಂಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು, ಕಲಾಪದ ಹಾಜರಾತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಪಕ್ಷದ ಅನೇಕ ಸಚಿವರು ಕಲಾಪದಲ್ಲಿ ಭಾಗಿಯಾಗದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕಿಂತಲೂ ಮುಖ್ಯವಾದ ಕೆಲಸ ಸಂಸದರಿಗೆ ಮತ್ತೇನು ಇರುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ ಮೋದಿ, ಸಂಸತ್ ಕಲಾಪಕ್ಕೆ ಗೈರು ಹಾಜರಾಗಬೇಡಿ, ಗೈರು ಹಾಜರಾದರೆ ನಿಮ್ಮನ್ನೇ ಬದಲಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jedovatá dětská Srdcové sušenky: lásku, kterou můžete 7 sofistikovaných a elegantních Chcete najít medvěda v lese za 14 sekund: neuveritelný Nápověda: Najděte gumovou botu za 10