alex Certify ಒಂದೇ ದಿನದಲ್ಲಿ 23 ಲಕ್ಷ ರೂ. ಖರ್ಚು ಮಾಡಿದ್ದರು ಈ ನಟಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನದಲ್ಲಿ 23 ಲಕ್ಷ ರೂ. ಖರ್ಚು ಮಾಡಿದ್ದರು ಈ ನಟಿ….!

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ನಿಮಗೆ ಮುದ ನೀಡುವುದರ ಜೊತೆಗೆ ಮಾಹಿತಿಯನ್ನು ನೀಡುತ್ತವೆ. ಅನೇಕ ವಿಷಯಗಳು ನಿಮಗೆ ಅಚ್ಚರಿಯನ್ನೂ ತರುತ್ತವೆ. ಅವುಗಳಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಬೀದಿ ಆಹಾರವನ್ನು ಮಾರಾಟ ಮಾಡುವ ಪಿಎಚ್‌ಡಿ ವಿದ್ವಾಂಸ, ಮುಂಬೈಗೆ ಹೋಗುವ ಇಂಡಿಗೋ ವಿಮಾನದಲ್ಲಿ ಪೈಲಟ್ ಹಿಂದಿಯಲ್ಲಿ ಘೋಷಣೆ ಮಾಡುತ್ತಿರುವುದು, ಡಾಲಿ ಚಾಯ್‌ವಾಲಾ ಅವರ ಈವೆಂಟ್‌ಗಳ ಬೇಡಿಕೆಗಳ ಬಗ್ಗೆ ಕುವೈತ್ ನ ವ್ಲಾಗರ್ ಹಕ್ಕು ಸಾಧಿಸುವುದು ಸೇರಿದಂತೆ ಅನೇಕ ವಿಶೇಷ, ವಿಚಿತ್ರ ವಿಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತವೆ. ಇದರೊಂದಿಗೆ ಸಮೀರಾ ದುಬೈ ಮಾಲ್‌ನಲ್ಲಿ ದಿನವೊಂದಕ್ಕೆ 23 ಲಕ್ಷ ರೂಪಾಯಿ ಖರ್ಚು ಮಾಡುವ ಬಗ್ಗೆಯೂ ತಿಳಿಸಿದ್ದಾರೆ. ಅಂತಹ ಪ್ರಮುಖ ವಿಚಾರಗಳು ಇಲ್ಲಿವೆ.

ಬೀದಿಯಲ್ಲಿ ಆಹಾರ ಮಾರಾಟ ಮಾಡುವ ಪಿಎಚ್‌ಡಿ ವಿದ್ವಾಂಸ

ತಮಿಳುನಾಡಿನ ಚೆನ್ನೈನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಬೀದಿ ಬದಿಯಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ವೃತ್ತಿಯಲ್ಲಿದ್ದಾರೆ. ಆಹಾರ ಮಳಿಗೆಗೆ ಅಮೆರಿಕನ್ ವ್ಲಾಗರ್ ಭೇಟಿ ನೀಡಿದಾಗ ಈ ವಿಷಯ ಬಹಿರಂಗವಾಗಿದೆ. ವೈರಲ್ ಕ್ಲಿಪ್‌ನಲ್ಲಿ, ಮಾರಾಟಗಾರ ಮಾತನಾಡುತ್ತಾ ತಾನು ಎಸ್‌ಆರ್‌ಎಂ ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆಯುತ್ತಿರುವುದಾಗಿ ಮತ್ತು ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

* ಇಂಡಿಗೋ ವಿಮಾನದಲ್ಲಿ ಹಿಂದಿ ಘೋಷಣೆ*

ಇಂಡಿಗೋ ವಿಮಾನದಲ್ಲಿ ಪೈಲಟ್ ಹಿಂದಿಯಲ್ಲಿ ಘೋಷಣೆ ಮಾಡುತ್ತಿರುವುದು ಸಹ ವೈರಲ್ ಆಗಿದ್ದು ಗಮನ ಸೆಳೆದಿದೆ. ವೀಡಿಯೊದಲ್ಲಿ ಪೈಲಟ್ ತನ್ನನ್ನು ಮತ್ತು ತನ್ನ ಸಿಬ್ಬಂದಿಯನ್ನು ಹಿಂದಿಯಲ್ಲಿ ಪರಿಚಯಿಸಿಕೊಂಡು ಎಲ್ಲರೂ ಸೀಟ್ ಬೆಲ್ಟ್ ಗಳನ್ನು ಧರಿಸುವಂತೆ ಪ್ರಯಾಣಿಕರನ್ನು ವಿನಂತಿಸಿಕೊಂಡಿದ್ದಾರೆ.

ಸಮೀರಾ ರೆಡ್ಡಿ ಅವರ ಪ್ರಾಮಾಣಿಕ ತಪ್ಪೊಪ್ಪಿಗೆ

ಇತ್ತೀಚಿನ ಪಾಡ್‌ಕಾಸ್ಟ್ ನಲ್ಲಿ ಮಾಜಿ ನಟಿ ಸಮೀರಾ ರೆಡ್ಡಿ ಅವರು ದುಬೈ ಮಾಲ್‌ವೊಂದರಲ್ಲಿ ಒಂದೇ ದಿನದಲ್ಲಿ 23 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಇದು ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ.

ಡಾಲಿ ಚಾಯ್ ವಾಲಾ ಮೇಲೆ ಕುವೈತ್ ಫುಡ್ ವ್ಲೋಗರ್ ಹಕ್ಕುಗಳು

ಬಿಲ್ ಗೇಟ್ಸ್ ತಮ್ಮ ಮಳಿಗೆಯಲ್ಲಿ ಟೀ ಸೇವಿಸಿದ ಬಳಿಕ ಖ್ಯಾತರಾಗಿರುವ ಡಾಲಿ ಚಾಯ್‌ವಾಲಾ ಕಾರ್ಯಕ್ರಮಗಳಿಗೆ ಹಾಜರಾಗಲು 5 ಲಕ್ಷ ರೂಪಾಯಿಗಳನ್ನು ವಿಧಿಸುತ್ತಾರೆ, ಈ ವೇಳೆ ತಂಗಲು ಅವರು ಪಂಚತಾರಾ ಹೋಟೆಲ್‌ ಕೇಳುತ್ತಾರೆ ಎಂದು ಕುವೈತ್‌ನ ಫುಡ್ ವ್ಲಾಗರ್ ಒಬ್ಬರು ಹೇಳಿದ್ದಾರೆ.

*ಭ್ರಷ್ಟಾಚಾರದ ಬಗ್ಗೆ ವಿಭಿನ್ನ ಪ್ರತಿಭಟನೆ *

ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಗ್ರಾಮದ ಸರಪಂಚ್‌ನ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆಯಲು ನೀಮಚ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪುವ ವೇಳೆ ಹಲವಾರು ದಾಖಲೆಗಳನ್ನು ತನ್ನ ದೇಹಕ್ಕೆ ಸುತ್ತಿಕೊಂಡು ರಸ್ತೆಯಲ್ಲಿ ತೆವಳಿದ್ದಾರೆ.

ಈ ವಿಡಿಯೋಗಳು ವೈರಲ್ ಆಗಿದ್ದು ಗಮನ ಸೆಳೆದಿವೆ.
———–

— Fundamental Investor ™ 🇮🇳 (@FI_InvestIndia) September 3, 2024

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...