alex Certify ಈ ರಾಶಿಯವರಿಗಿದೆ ಇಂದು ಉತ್ತಮ ʼಲಾಭʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಉತ್ತಮ ʼಲಾಭʼ

ಮೇಷ : ಉದ್ಯೋಗಕ್ಕೆ ಅರಸುತ್ತಿರುವವರಿಗೆ ಸದಾವಕಾಶ ಸಿಗಲಿದೆ. ತೀಕ್ಷ್ಣವಾದ ಮಾತುಗಳಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಲಿದ್ದೀರಿ. ನಿಮ್ಮ ಮಾತು ಬೇರೆಯವರ ಮನಸ್ಸಿಗೆ ನೋವಾಗದಂತೆ ವರ್ತಿಸಿ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯುತ್ತೀರಿ.

ವೃಷಭ: ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಸಂತುಷ್ಟರಾಗಲಿದ್ದೀರಿ. ದಾಂಪತ್ಯ ಜೀವನದಲ್ಲಿನ ವಿರಸಗಳು ದೂರಾಗಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶಿಕ್ಷಕರಿಗೆ ಇದು ಒತ್ತಡಮಯ ದಿನವಾಗಿದೆ.

ಮಿಥುನ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಇನ್ನಷ್ಟು ಪರಿಶ್ರಮ ವಹಿಸಲಿದ್ದಾರೆ. ಸಂಬಂಧಿಕರಿಂದ ಟೀಕೆ ಎದುರಿಸಲಿದ್ದೀರಿ. ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಸಾಲಗಾರರು ನಿಮ್ಮನ್ನು ಕಾಡಬಹುದು.

ಕಟಕ : ಮೊದಲ ಭೇಟಿಯಲ್ಲೇ ಅವರ ಬಗ್ಗೆ ಯಾವುದೇ ಅಭಿಪ್ರಾಯ ಹೊಂದಬೇಡಿ. ಅವರ ಗುಣ ಬೇರೆಯದ್ದೇ ಇರಬಹುದು. ಕೋರ್ಟ್ ಕಚೇರಿ ವಿಚಾರದಲ್ಲಿ ನಿಮಗೆ ಮುನ್ನಡೆ ಕಾದಿದೆ. ಜವಳಿ ಉದ್ಯಮಿಗಳಿಗೆ ಉತ್ತಮ ಲಾಭವಿದೆ.

ಸಿಂಹ : ನಿಮ್ಮ ಬುದ್ಧಿ ನಿಮ್ಮ ಸ್ಥಿಮಿತದಲ್ಲಿ ಇರಲಿ. ಇಲ್ಲವಾದಲ್ಲಿ ಭಾರೀ ನಷ್ಟ ಅನುಭವಿಸಲಿದ್ದೀರಿ. ಮನೆಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿ. ಕುಲದೇವರ ದರ್ಶನಕ್ಕೆ ಕುಟುಂಬಸ್ಥರು ತೆರಳಲಿದ್ದೀರಿ.

ಕನ್ಯಾ: ರಾಜಕೀಯ ರಂಗದಲ್ಲಿ ಇರುವವರು ಮಾಡದ ತಪ್ಪಿಗೆ ಅಪವಾದವನ್ನು ಎದುರಿಸಬೇಕಾಗಿ ಬರಬಹುದು. ಈ ದಿನ ನಿಮ್ಮ ದೇಹಕ್ಕೆ ಗಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಯಾಣ ಮಾಡಬೇಡಿ. ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಿದೆ.

ತುಲಾ : ಸಹೋದರರು ಹಿಂದುರಿಗಿಸಬೇಕಿದ್ದ ಹಣವನ್ನು ನೀಡಲಿದ್ದಾರೆ. ಇದರಿಂದ ಆರ್ಥಿಕವಾಗಿ ನೀವು ಇನ್ನಷ್ಟು ಸದೃಢವಾಗಲಿದ್ದೀರಿ. ಸಹೋದರರ ಜೊತೆ ಕೂತು ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕುವ ಕ್ಷಣಕ್ಕೆ ಸಾಕ್ಷಿಯಾಗಲಿದ್ದೀರಿ.

ವೃಶ್ಚಿಕ : ತುರ್ತು ಸೇವಾ ಸಿಬ್ಬಂದಿಗೆ ಒತ್ತಡ ಇನ್ನಷ್ಟು ಹೆಚ್ಚಲಿದೆ. ಸೋಮಾರಿತನದಿಂದ ಉದ್ಯಮಿಗಳು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ.  ಪತಿ – ಪತ್ನಿಯ ನಡುವೆ ಅನಗತ್ಯ ವಾದ ಆಗದಂತೆ ಎಚ್ಚರ ವಹಿಸಿ.

ಧನು : ಅತಿಯಾದ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಶನೈಶ್ಚರನ ಧ್ಯಾನ ಮಾಡಿ. ಅತಿಯಾದ ಕೋಪದಿಂದ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲಿದ್ದೀರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅವಸರ ಬೇಡ.

ಮಕರ : ಸಹೋದ್ಯೋಗಿಗಳ ಅತಿಯಾದ ಪ್ರೀತಿಯನ್ನು ನಂಬಬೇಡಿ. ನಂಬಿಸಿ ಕುತ್ತಿಗೆ ಕೊಯ್ಯುವ ಪ್ರಯತ್ನ ಕೂಡ ಇದಾಗಿರಬಹುದು. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಪದೇ ಪದೇ ಕಾಡಲಿದೆ. ಇದರಿಂದ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗಲಿದೆ. ಸಂತಾನ ಭಾಗ್ಯವಿದೆ.

ಕುಂಭ : ಕರಕುಶಲ ಕಾರ್ಮಿಕರಿಗೆ ಇದು ಶುಭ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳ ಟೀಕೆ ನಿಮ್ಮನ್ನು ಇನ್ನಷ್ಟು ಕುಗ್ಗಿಸಲಿದೆ. ಆದರೆ ಕೊಂಕು ಮಾತುಗಳಿಂದ ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಕಲಾವಿದರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ಮೀನ : ನವವಿವಾಹಿತರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ಕಚೇರಿ ಕೆಲಸಕ್ಕೆ ಹೋಗುವ ಮುನ್ನ ಎಲ್ಲಾ ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ತಾಳ್ಮೆ ಇಲ್ಲದೇ ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆಯಲು ಸಾಧ್ಯವೇ ಇಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...