alex Certify ಪಂಚ ರತ್ನಾನೋ ಪಂಚೆ ರತ್ನಾನೋ, ಅದೇನು ಕೊಡ್ತಾರೋ ಗೊತ್ತಿಲ್ಲ: ಡಿ.ಕೆ. ಸುರೇಶ್ ಲೇವಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಚ ರತ್ನಾನೋ ಪಂಚೆ ರತ್ನಾನೋ, ಅದೇನು ಕೊಡ್ತಾರೋ ಗೊತ್ತಿಲ್ಲ: ಡಿ.ಕೆ. ಸುರೇಶ್ ಲೇವಡಿ

ರಾಮನಗರ: ಮಾಜಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ‘ಪಂಚರತ್ನ ಯಾತ್ರೆ’ ಕೈಗೊಂಡಿರುವ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದ್ದಾರೆ.

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಕುದೂರಿನಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಬಡವರು, ಕಾರ್ಯಕರ್ತರ ಬಗ್ಗೆ ಚಿಂತನೆ ಮಾಡದವರು ಈಗ ಪಂಚರತ್ನ ಯೋಜನೆ ಕೊಡುತ್ತೇವೆ ಎಂದು ಹೊರಟಿದ್ದಾರೆ. ಪಂಚ ರತ್ನಾನೋ ಪಂಚೆ ರತ್ನಾನೋ, ಅದೇನ್ ಕೊಡ್ತಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಕೈಗೊಂಡಿರುವ ಪಂಚರತ್ನ ರಥಯಾತ್ರೆ ಬಗ್ಗೆ ಲೇವಡಿ ಮಾಡಿದ್ದಾರೆ

ಕುಮಾರಸ್ವಾಮಿ ಬಗ್ಗೆ ಮಾಗಡಿ ಬಾಲಕೃಷ್ಣ ಅವರಿಗೆ ಗೊತ್ತಿದೆ. ಯಾರ್ಯಾರಿಗೆ ಏನೇನು ಕೊಡಿಸಿದ್ದಾರೆ? ಪಂಚ ರತ್ನವನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎಂದು ಬಾಲಕೃಷ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಕುಮಾರಸ್ವಾಮಿಗೆ ಗೊತ್ತಿರೋದು ಎರಡೇ ರತ್ನವಂತೆ, ಉಳಿದ ರತ್ನಗಳ ಬಗ್ಗೆ ಗೊತ್ತಿಲ್ಲವಂತೆ ಎಂದು ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...