ಕೋವಿಡ್ 19 ಚಿಕಿತ್ಸೆ ಹೆಸರಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ಧ ರೋಗಿಯ ಕುಟುಂಬಸ್ಥರು ನೀಡಿದ ದೂರನ್ನ ಆಧರಿಸಿ ವಿಚಾರಣೆ ನಡೆಸಿದ ಹರಿಯಾಣದ ಪಂಚಕುಲ ಡೆಪ್ಯೂಟಿ ಕಮಿಷನರ್ ವಿನಯ್ ಪ್ರತಾಪ್ ಸಿಂಗ್, ರೋಗಿಗಳ ಕುಟುಂಬಕ್ಕೆ ಮಂಗಳವಾರ ಚೆಕ್ಗಳನ್ನ ಹಸ್ತಾಂತರಿಸಿದರು. ರೋಗಿಗಳ ಕುಟುಂಬಕ್ಕೆ ಡೆಪ್ಯೂಟಿ ಕಮಿಷನರ್ ಹಸ್ತಾಂತರಿಸಿದ ಒಟ್ಟು ಚೆಕ್ ಮೌಲ್ಯ 21 ಲಕ್ಷ ರೂಪಾಯಿ ಆಗಿದೆ.
ಈ ಚೆಕ್ಗಳನ್ನ ಪಾರಸ್ ಆಸ್ಪತ್ರೆ, ಅಲ್ಕೆಮಿಸ್ಟ್ ಆಸ್ಪತ್ರೆ ಹಾಗೂ ವಿಂಗ್ ಆಸ್ಪತ್ರೆ ಪ್ರತಿನಿಧಿಗಳು ರೋಗಿಗಳ ಕುಟುಂಬಕ್ಕೆ ಹಸ್ತಾಂತರಿಸಬೇಕಿತ್ತು. ಆದರೆ ಸಂತ್ರಸ್ತ ಕುಟುಂಬಗಳು ಇವರ ಕೈನಿಂದ ಚೆಕ್ ಪಡೆಯಲು ನಿರಾಕರಿಸಿದ ಹಿನ್ನೆಲೆ ವಿನಯ್ ಪ್ರತಾಪ್ ಸಿಂಗ್ರೇ ಈ ಚೆಕ್ಗಳನ್ನ ನೀಡಿದ್ರು ಎಂದು ತನಿಖಾ ಸಮಿತಿ ಸದಸ್ಯ ಬಿಬಿ ಸಿಂಘಲ್ ಹೇಳಿದ್ರು.
ಪಾರಸ್ ಆಸ್ಪತ್ರೆ 13 ರೋಗಿಗಳಿಗೆ 12.91 ಲಕ್ಷ ರೂಪಾಯಿ, ಅಲ್ಕೆಮಿಸ್ಟ್ ಆಸ್ಪತ್ರೆಯು 6 ರೋಗಿಗಳಿಗೆ 6.39 ಲಕ್ಷ ರೂಪಾಯಿ ಹಣವನ್ನ ಮರುಪಾವತಿ ಮಾಡಿದೆ.
ವಿಂಗ್ಸ್ ಆಸ್ಪತ್ರೆಯು ಮೂವರು ರೋಗಿಗಳಿಗೆ 1.77 ಲಕ್ಷ ರೂಪಾಯಿ ಮರುಪಾವತಿ ಮಾಡಿದೆ. ಈ ಮೂರು ಆಸ್ಪತ್ರೆಗಳಿಗೆ ಏಪ್ರಿಲ್ 1ರಿಂದ ಮೇ 15ರೊಳಗಿನ ಎಲ್ಲಾ ಬಿಲ್ಗಳನ್ನ ಜುಲೈ 30ರ ಒಳಗಾಗಿ ಲೆಕ್ಕಪರಿಶೋಧನೆ ಮಾಡುವಂತೆ ಸೂಚನೆ ನೀಡಲಾಗಿದೆ.