alex Certify ಹಬ್ಬದ ದಿನದಂದು ಗಜಮುಖನಿಗೆ ಅರ್ಪಿಸಿ ʼಕರಿಗಡುಬುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ದಿನದಂದು ಗಜಮುಖನಿಗೆ ಅರ್ಪಿಸಿ ʼಕರಿಗಡುಬುʼ

ಗಣೇಶ ಚತುರ್ಥಿಯಂದು ನಾಡಿನಾದ್ಯಂತ ಪೂಜೆಗೊಳ್ಳುವ ಗಣೇಶನಿಗೆ ನೈವೇದ್ಯವೇ ಅತಿ ಮುಖ್ಯವಾದದ್ದು. ಗಣಪನನ್ನು ಪುರಾಣಗಳು ಸಿಹಿ ತಿನಿಸುಗಳ ಪ್ರಿಯ ಎಂದೇ ಬಿಂಬಿಸಿವೆ. ಅದರಲ್ಲೂ ಕರಿಗಡುಬು ಗಜಮುಖನ ನೈವೈದ್ಯ ಪಟ್ಟಿಯಲ್ಲಿ ಇರಲೇಬೇಕು. ಕರಿಗಡುಬು ಸಿದ್ದಪಡಿಸೋದು ಕೂಡಾ ಸುಲಭವೇ.

ಬೇಕಾಗುವ ವಸ್ತುಗಳು :

ಒಂದು ಕಪ್ಪು ಕಡಲೆ ಬೇಳೆ, ಎರಡು ಕಪ್ ಬೆಲ್ಲ(ಸಕ್ಕರೆ), ಒಂದು ಕಪ್ ಗೋಧಿ ಹಿಟ್ಟು, 2 ಚಮಚ ತುಪ್ಪ, ಚಿಟಿಕೆ ಉಪ್ಪು, ಏಲಕ್ಕಿ, ಕರಿಯಲು ಎಣ್ಣೆ.

ಮಾಡುವ ವಿಧಾನ :

ಕಡಲೆಬೇಳೆಯನ್ನು ಮೆತ್ತಗೆ ಬೇಯಿಸಿ, ನೀರು ಬಸಿದು ಬೆಲ್ಲ ಹಾಕಿ ಒಲೆಯ ಮೇಲಿಟ್ಟು ಕಾಯಿಸಿಕೊಳ್ಳಿ. ಇದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ. ಸೀದು ಹೋಗದಂತೆ ಕಲಕಿ, ಹೂರಣ ತಳ ಬಿಟ್ಟ ನಂತರ ಇಳಿಸಿ.

ತಣಿದ ನಂತರ ಕೈಯಲ್ಲಿ ಸ್ವಲ್ಪ ಹಿಸುಕಿ ಚಿಕ್ಕ-ಚಿಕ್ಕ ಉಂಡೆ ಮಾಡಿ. ಗೋಧಿ ಹಿಟ್ಟಿಗೆ ಉಪ್ಪು, ಸಕ್ಕರೆ, ತುಪ್ಪ, ನೀರು ಹಾಕಿ ಹಿಟ್ಟನ್ನು ಕಲಸಿ. ಪೂರಿಯಂತೆ ಲಟ್ಟಿಸಿ, ಬಳಿಕ ಕಡಲೆಹೂರಣ ಉಂಡೆಯನ್ನು ಒಳಗಿಟ್ಟು ಎರಡು ಬದಿಯನ್ನು ಮಡಚಿ ಕರಜಿಕಾಯಿಯಂತೆ ಮಾಡಿ ಕಾದ ಎಣ್ಣೆ ಹೊಂಬಣ್ಣ ಬರುವರೆಗೆ ಕರಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Zimowy dżem z wiciokrzewu Jak zrobić idealny domowy Wciągający Eksperyment Kulinarne: Konfitura Zaczarowane smaki Niesamowity dżem z rabarbaru z dodatkiem Odkryj sekrety przygotowania Tajemnice idealnego przygotowania klasycznego rabarbarowego dżemu: 7 Zamrożona Eksplozja Smaku: Odkrywaj sekrety doskonałego sernika bez konieczności pieczenia