alex Certify ಇವರಿಗೆ ಅದೃಷ್ಟ ತರಲಿದೆ ಡಿಸೆಂಬರ್ ತಿಂಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರಿಗೆ ಅದೃಷ್ಟ ತರಲಿದೆ ಡಿಸೆಂಬರ್ ತಿಂಗಳು

ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರದ ಮೂಲಕವೂ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳಲಾಗುತ್ತದೆ. ಅಂಕೆಶಾಸ್ತ್ರದ ಮೂಲಕ ನಿಮ್ಮ ಭಾಗ್ಯದ ಸಂಖ್ಯೆಯನ್ನು ಕಂಡುಹಿಡಿಯಲು ನೀವು ನಿಮ್ಮ ಹುಟ್ಟಿದ ದಿನಾಂಕವನ್ನು ಕೂಡಿಸಬೇಕು. ಕೂಡಿಸಿದ ನಂತರ ಯಾವ ಸಂಖ್ಯೆ ಬರುತ್ತದೆಯೋ ಅದೇ ನಿಮ್ಮ ಲಕಿ ನಂಬರ್ ಆಗಿರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ 14 ರಂದು ಜನಿಸಿದ್ರೆ 1+4 =5. ಹಾಗಾಗಿ ಅವನ ಅದೃಷ್ಟ ಸಂಖ್ಯೆ 5 ಆಗಿರುತ್ತದೆ. ಹಾಗೇ ಆ ವ್ಯಕ್ತಿ 5 ಅಥವಾ 23 ನೇ ತಾರೀಕಿನಂದು ಜನಿಸಿದರೆ ಅವನ ಅದೃಷ್ಟ ಸಂಖ್ಯೆ 5 ಆಗಿರುತ್ತೆ.

ಡಿಸೆಂಬರ್ ತಿಂಗಳಲ್ಲಿ ಕೆಲವು ಅದೃಷ್ಟ ಸಂಖ್ಯೆಗಳ ಭವಿಷ್ಯ ಹೀಗಿರಲಿದೆ:

ಅದೃಷ್ಟ ಸಂಖ್ಯೆ 1 : ಅದೃಷ್ಟ ಸಂಖ್ಯೆ 1 ಇರುವವರಿಗೆ ಡಿಸೆಂಬರ್ ತಿಂಗಳಲ್ಲಿ ವ್ಯಾಪಾರ ಚೆನ್ನಾಗಿರಲಿದೆ. ಸ್ನೇಹಿತರ ಸಹಾಯ ಸಿಗಲಿದೆ ಮತ್ತು ಅಧಿಕಾರಿಗಳಿಗೆ ಸ್ಥಾನ ಸಿಗಲಿದೆ. ಡಿಸೆಂಬರ್ ತಿಂಗಳ ಶುರುವಿನಲ್ಲಿ ನಿಂತುಹೋದ ಕೆಲಸಗಳು ಮತ್ತೆ ಶುರುವಾಗುತ್ತವೆ. ತಿಂಗಳ ಮಧ್ಯದಲ್ಲಿ ವ್ಯಾಪಾರದಲ್ಲಿ ಲಾಭವಾಗಲಿದೆ. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಬಿರುಕು ಮೂಡಬಹುದು. ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.

ಅದೃಷ್ಟ ಸಂಖ್ಯೆ 2 : ಡಿಸೆಂಬರ್ ನಲ್ಲಿ ವ್ಯಾಪಾರಕ್ಕೆ ಅನುಕೂಲವಾಗಲಿದೆ. ಸ್ನೇಹಿತರ ಸಹಾಯದಿಂದ ಕಷ್ಟದ ಕೆಲಸವೂ ಸುಲಭವಾಗಲಿದೆ. ಬಹಳ ಹಿಂದಿನಿಂದ ಇರುವ ವಿವಾದಗಳು ಒಂದು ಹಂತಕ್ಕೆ ಬರಲಿದೆ. ಈ ಅದೃಷ್ಟ ಸಂಖ್ಯೆಯವರು ಯೋಚಿಸಿ ನಿರ್ಧಾರ ಮಾಡಬೇಕು. ಸಂಸಾರದಲ್ಲಿ ಶುಭ ವಾರ್ತೆ ಬರಲಿದೆ. ದಾಂಪತ್ಯ ಜೀವನ ಸುಖವಾಗಲಿದೆ.

ಅದೃಷ್ಟ ಸಂಖ್ಯೆ 4 : ಅದೃಷ್ಟ ಸಂಖ್ಯೆ 4 ಇರುವವರಿಗೆ ಡಿಸೆಂಬರ್ ತಿಂಗಳಲ್ಲಿ ವ್ಯಾಪಾರ ಚೆನ್ನಾಗಿರಲಿದೆ. ಸ್ನೇಹಿತರ ಸಹಾಯ ಸಿಗಲಿದೆ ಮತ್ತು ಅಧಿಕಾರಿಗಳಿಗೆ ಸ್ಥಾನ ಸಿಗಲಿದೆ. ಹೊಸ ಯೋಜನೆಗಳನ್ನು ಆರಂಭ ಮಾಡಬಹುದು. ಬಹಳ ಹಿಂದಿನಿಂದ ಇರುವ ವಿವಾದಗಳು ಒಂದು ಹಂತಕ್ಕೆ ಬರಲಿದೆ. ತಿಂಗಳ ಮಧ್ಯದಲ್ಲಿ ವ್ಯಾಪಾರದ ವಿಷಯದಲ್ಲಿ ನೀವು ಟ್ರಿಪ್ ಹೋಗಬಹುದು.

ಅದೃಷ್ಟ ಸಂಖ್ಯೆ 5 : ಡಿಸೆಂಬರ್ ಮೊದಲಲ್ಲಿ ವ್ಯಾಪಾರಕ್ಕೆ ಅನುಕೂಲವಾಗಲಿದೆ. ಇದರಿಂದ ಲಾಭವೂ ಆಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಲಾಭವಾಗಲಿದೆ. ನಿಮ್ಮ ಕಾರ್ಯಕ್ಷೇತ್ರ ಮತ್ತು ವ್ಯಾಪಾರದ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ವಾದ-ವಿವಾದಗಳಿಂದ ದೂರವಿರಿ. ಡಿಸೆಂಬರ್ ತಿಂಗಳ ಅಂತ್ಯದಲ್ಲಿ ದಾಂಪತ್ಯ ಜೀವನದಲ್ಲಿ ಒತ್ತಡ ಬರಬಹುದು. ಮಾನಸಿಕವಾಗಿ ನೀವು ಹೆದರಬಹುದು.

ಅದೃಷ್ಟ ಸಂಖ್ಯೆ 9 : ಡಿಸೆಂಬರ್ ನಲ್ಲಿ ವ್ಯಾಪಾರಕ್ಕೆ ಅನುಕೂಲವಾಗಲಿದೆ. ಸ್ನೇಹಿತರ ಸಹಾಯದಿಂದ ಕೆಲಸ ಸುಲಭವಾಗಲಿದೆ. ಅಧಿಕಾರಿಗಳಿಗೆ ಸ್ಥಾನ ಸಿಗಲಿದೆ. ಡಿಸೆಂಬರ್ ತಿಂಗಳ ಮೊದಲಲ್ಲಿ ಯೋಚಿಸಿದ ಯೋಜನೆಗಳು ಆರಂಭವಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಧೈರ್ಯದಿಂದ ಕೆಲಸ ಮಾಡಬೇಕಿದೆ. ತಿಂಗಳ ಕೊನೆಯಲ್ಲಿ ಮನೆಯಲ್ಲಿ ಯಾರಾದರೂ ಅಸ್ವಸ್ಥರಾಗಬಹುದು, ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ವಾಹನ ಮತ್ತು ಯಂತ್ರಗಳ ಬಳಕೆ ಮಾಡುವಾಗ ಹುಷಾರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...