alex Certify ಮೆರವಣಿಗೆಯಲ್ಲಿ ಸಾಗುತ್ತಿದ್ದ ವಧು – ವರರಿಗೆ ಕಾದಿತ್ತು ʼಅಚ್ಚರಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆರವಣಿಗೆಯಲ್ಲಿ ಸಾಗುತ್ತಿದ್ದ ವಧು – ವರರಿಗೆ ಕಾದಿತ್ತು ʼಅಚ್ಚರಿʼ

ವಾರದ ಹಿಂದಷ್ಟೇ ಪಂಜಾಬ್​ನ 16ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಚರಣ್​ಪ್ರೀತ್​ ಸಿಂಗ್​ ಚನ್ನಿ ಈಗಾಗಲೇ ಸ್ಥಳೀಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಶಕ್ತರಾಗಿದ್ದಾರೆ.

ಭಾನುವಾರದಂದು ರಸ್ತೆಯಲ್ಲಿ ಕಾರು ನಿಲ್ಲಿಸಿದ ಸಿಎಂ ಚನ್ನಿ ನವವಿವಾಹಿತರಿಗೆ ಶುಭಾಶಯ ಕೋರಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋವನ್ನು ಪಂಜಾಬ್​​​ ಸರ್ಕಾರದ ಅಧಿಕೃತ ಟ್ವಿಟರ್​ ಖಾತೆಯಿಂದಲೇ ಶೇರ್​ ಮಾಡಲಾಗಿದೆ. ಬಟಿಂಡಾಗೆ ಭೇಟಿ ನೀಡಿದ್ದ ವೇಳೆ ಸಿಎಂ ಚರಣ್​ ಪ್ರೀತ್​ ಸಿಂಗ್​ ಚುನ್ನಿ ಗ್ರಾಮದ ನವಜೋಡಿಯೊಂದನ್ನು ಕಂಡು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಶುಭಾಶಯ ಕೋರಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.

ಈ ವೈರಲ್ ವಿಡಿಯೋದಲ್ಲಿ ಸಿಎಂ ಚರಣ್​ಪ್ರೀತ್​, ವರನನ್ನು ಆಲಂಗಿಸಿಕೊಂಡಿದ್ದು ಮಾತ್ರವಲ್ಲದೇ ವಧುವಿಗೆ ಉಡುಗೊರೆಯನ್ನೂ ನೀಡಿದ್ದಾರೆ. ನವಜೋಡಿಯ ಕುಟುಂಬಸ್ಥರು ನೀಡಿದ ಸಿಹಿ ತಿಂಡಿಯ ರುಚಿಯನ್ನು ಸಿಎಂ ಸವಿದರು.

ಯಾವಾಗ ಮದುವೆ ಕಾರ್ಯ ನೆರವೇರಿತು ಎಂದು ಸಿಎಂ ಕೇಳಿದ ಪ್ರಶ್ನೆಗೆ ಕುಟುಂಬಸ್ಥರು ಶನಿವಾರ ಎಂದು ಉತ್ತರ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಪಂಜಾಬ್​ ಸಿಎಂ ಸರಳತೆಗೆ ಭೇಷ್​ ಅಂತಿದ್ದಾರೆ.

https://twitter.com/i/status/1442102742663663621

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...