ಎನ್ ಸಿ ಪಿಯ ಬಂಡಾಯ ಬಣವು ಶರದ್ ಪವಾರ್ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಎರಡು ದಶಕಗಳಿಂದ ಮುನ್ನಡೆಸಿದ ಪಕ್ಷದ ಉನ್ನತ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಬಂಡಾಯ ಬಣದ ಮೂಲಗಳು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ, ಅದರಲ್ಲಿ ಅವರು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದ್ದಾರೆ. ಪಕ್ಷದ ಚುನಾವಣಾ ಚಿನ್ಹೆಯನ್ನು ಉಳಿಸಿಕೊಂಡೇ ಸಿದ್ಧ ಎಂದು ಶರದ್ ಪವಾರ್ ಬೆಂಬಲಿಗರಿಗೆ ಭರವಸೆಯನ್ನೂ ನೀಡಿದ್ದಾರೆ.
“ಯಾರು ಎಷ್ಟು ಶಾಸಕರು ನಮ್ಮೊಂದಿಗೆ ಇದ್ದಾರೆ ಎಂಬುದು ಇಂದಿನ ಚರ್ಚೆಯಾಗಿದೆ. ನಾನು ಈ ಬಗ್ಗೆ ಗಮನ ಹರಿಸುವುದಿಲ್ಲ. ಈ ಹಿಂದೆ ನಾನು 68 ಶಾಸಕರನ್ನು ಹೊಂದಿದ್ದೆ, ನಾನು ಸ್ವಲ್ಪ ಸಮಯದವರೆಗೆ ಹೊರಗೆ ಹೋದಾಗ, 62 ಜನರು ನಮ್ಮನ್ನು ತೊರೆದರು, ನನ್ನ ಬಳಿ ಕೇವಲ ಆರು ಜನರಿದ್ದರು… ಚುನಾವಣೆಯಲ್ಲಿ 62ರಲ್ಲಿ ನಾಲ್ವರು ಮಾತ್ರವೇ ಮರಳು ಬರಲು ಸಾಧ್ಯವಾಯಿತು. ನಾವು ಹೊಸ ಮುಖಗಳೊಂದಿಗೆ ಗೆದ್ದಿದ್ದೇವೆ ಎಂದು ಅವರು ಹೇಳಿದರು.NCP ಯ ಬಂಡಾಯ ಬಣ ಅಜಿತ್ ಪವಾರ್ ಅವರನ್ನು NCP ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಿದೆ ಎಂದು ತಿಳಿದು ಬಂದಿದೆ.