alex Certify ಚಾಮುಂಡಿ ಬೆಟ್ಟದ ನಂದಿಬೆಟ್ಟ ಮಾರ್ಗದಲ್ಲಿ ಭೂಕುಸಿತ: ಮೈಸೂರು, ಮಂಡ್ಯದಲ್ಲಿ ಅವಾಂತರ ಸೃಷ್ಠಿಸಿದ ಮಳೆ, ಜನಜೀವನ ಅಸ್ತವ್ಯಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಮುಂಡಿ ಬೆಟ್ಟದ ನಂದಿಬೆಟ್ಟ ಮಾರ್ಗದಲ್ಲಿ ಭೂಕುಸಿತ: ಮೈಸೂರು, ಮಂಡ್ಯದಲ್ಲಿ ಅವಾಂತರ ಸೃಷ್ಠಿಸಿದ ಮಳೆ, ಜನಜೀವನ ಅಸ್ತವ್ಯಸ್ತ

ಮೈಸೂರು: ಮೈಸೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಾಮುಂಡಿಬೆಟ್ಟದ ನಂದಿ ಬೆಟ್ಟದ ಬಳಿ ಭೂಕುಸಿತ ಉಂಟಾಗಿದೆ. ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿರುವುದರಿಂದ ವಾಹನ ಸಂಚಾರಕ್ಕೆ ಹೇರಲಾಗಿದೆ.

ನಂದಿ ಬೆಟ್ಟದ ಮಾರ್ಗದ ರಸ್ತೆಯಂಚಿನ ಗುಡ್ಡ ಕುಸಿದು ಅರ್ಧದಷ್ಟು ರಸ್ತೆ ಕೊಚ್ಚಿ ಹೋಗಿದೆ. ಮೈಸೂರಿನ ಹಲವೆಡೆ ರಸ್ತೆ ಮೇಲೆ ಭಾರಿ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.

ಭಾರಿ ಮಳೆಯಿಂದಾಗಿ ಮಂಡ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಂಡ್ಯದಲ್ಲಿ ಬೀಡಿ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಸಂಕಷ್ಟ ಅನುಭವಿಸಿದ್ದಾರೆ. ವಿದ್ಯುತ್ ಸ್ಥಗಿತಗೊಂಡಿದ್ದು, ಮನೆಯಲ್ಲಿನ ನೀರು ಹೊರಹಾಕುವಲ್ಲಿ ಜನ ಹೈರಾಣಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...