ಬೆಂಗಳೂರು : ಭೂ ಮಂಜೂರಾತಿ ಪಡೆದವರಿಗೆ ‘ನನ್ನ ಭೂಮಿʼ ಖಾತರಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಘೋಷಣೆ ಮಾಡಿದ್ದಾರೆ.
ಸರ್ಕಾರದಿಂದ ಭೂಮಿ ಮಂಜೂರಾಗಿ 50-60 ವರ್ಷ ಕಳೆದರೂ ಪಕ್ಕಾ ದಾಖಲೆ ಸಿಗದೇ, ಪೋಡಿ ದುರಸ್ತಿಯಾಗದೇ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಈಗ ಕಂದಾಯ ಇಲಾಖೆ ಅಧಿಕಾರಿಗಳೇ ಗ್ರಾಮಕ್ಕೆ ಹೋಗಿ ಸರ್ವೆ ನಡೆಸಿ ನಕ್ಷೆ, ಹೊಸ ಸರ್ವೆ ನಂಬರ್ ನೀಡಿ ಹೊಸ ಆರ್ಟಿಸಿ ಹಸ್ತಾಂತರಿಸುವ ಮೂಲಕ ʼನನ್ನ ಭೂಮಿʼ ಎಂಬ ಖಾತರಿ ನೀಡುತ್ತಿದ್ದಾರೆ. ಏಪ್ರಿಲ್ ಅಂತ್ಯಕ್ಕೆ 20,000 ಕುಟುಂಬಗಳಿಗೆ ಸೌಲಭ್ಯ ಕಲ್ಪಿಸುವ ಗುರಿ ಇದೆ. ಆರು ತಿಂಗಳ ಕಾಲ ಅಭಿಯಾನ ಯಶಸ್ವಿಯಾಗಿ ನಡೆದರೆ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ.