
ಮುಂಬೈ: ಮುಂಬೈನ ನಾಗಪಾಡದಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ಟ್ಯಾಂಕ್ನಲ್ಲಿ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಒಬ್ಬ ಕಾರ್ಮಿಕನ್ನು ರಕ್ಷಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗಪಾಡದ ಮಿಂಟ್ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಸ್ಪೇಸ್ ಕಟ್ಟಡದಲ್ಲಿ ಭಾನುವಾರ ಮಧ್ಯಾಹ್ನ ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಐದು ಗುತ್ತಿಗೆ ಕಾರ್ಮಿಕರು ನಿರ್ಮಾಣ ಕಟ್ಟಡದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದರು, ಉಸಿರುಗಟ್ಟುವಿಕೆಯಿಂದ ಒಳಗೆ ಮೂರ್ಛೆ ಹೋಗಿದ್ದಾರೆ. ಬಿಎಂಸಿಯ ಮುಂಬೈ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಪೊಲೀಸರು, ಬಿಎಂಸಿ ಮತ್ತು ಅಗ್ನಿಶಾಮಕ ದಳವು ಕಾರ್ಯಪ್ರವೃತ್ತವಾಗಿದ್ದು, ಅಸ್ವಸ್ಥರಾಗಿದ್ದ ಎಲ್ಲಾ ಕಾರ್ಮಿಕರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಜೆಜೆ ಆಸ್ಪತ್ರೆಯ ಸಿಎಂಒ ತಿಳಿಸಿದ್ದಾರೆ.